Kannada jokes


ನೀರು ಕುಡಿಯುವವನಿಗೆ ಹೆಸರಿಲ್ಲ ಹಾಲು ಕುಡಿಯುವವನಿಗೆ ಹೆಸರಿಲ್ಲ ಅದ್ರೇ ಎಣ್ಣೆ ಕುಡಿಯುವವನಿಗೆ ಮಾತ್ರ "ಕುಡುಕ" ಎಂದು ಹೆಸರು ಎಲ್ಲಿಯವರೇಗು ಈ ದೌರ್ಜನ್ಯ ಶೋಷಣೆ ಅಸಮಾನತೆ...
-------------------------------------------------------------------------------------------------------------------------
ಡಾಕ್ಟರ್: ಬನ್ನಿ ಉಮೇಶ್.. ಏನ್ ಸಮಾಚಾರ? ಉಮೇಶ್: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ.. ಡಾಕ್ಟರ್: ಡ್ರಿಂಕ್ಸ್ ಮಾಡ್ತೀರಾ? ಉಮೇಶ್: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...
-------------------------------------------------------------------------------------------------------------------------
ನಡು ರಾತ್ರಿಯಲ್ಲಿ ಕಳ್ಳ ಒಂದು ಮನೆಗೆ ನುಗ್ಗಿ ಕಳ್ಳತನಕ ಮಾಡಿಕೊಂಡು ಹೋಗ್ತಿದ್ದ.. ಮಲಗಿಕೊಂಡಿರುವ ಮಗು ಎದ್ದು ಬಿಟ್ಟಿತು, ಕಳ್ಳನನ್ನು ನೋಡಿ ಮಗು ಹೇಳಿತ್ತು, ಏ ನಿಮ್ಮೌನ್... ಆ ಸ್ಕೂಲ್ ಬ್ಯಾಗ್ ತಗೊಂಡು ಹೋಗಲೇ....ಬಿಟ್ಟ ಹೋದಿ ಅಂದ್ರ ಜೋರಾಗಿ ಚೀರತೇನಿ ನೋಡ ಮತ್ತ..

--------------------------------------------------------------------------------------------------------------------------------------------

ಜೋಕ್ ಜಾತ್ರೆ 👌 ----------- ಆಟೋ ಡ್ರೈವರ್ : ಸಾರಿ ಸಾರ್...... ಮೀಟರ್ ಹಾಕೋದು ಮರೆತೇ ಬಿಟ್ಟೆ...... ಗುಂಡ : ಪರವಾಗಿಲ್ಲ ಬಿಡಿ.... ನಾನೂ ಕೂಡ ಪರ್ಸ್ ತರೋದು ಮರೆತೇಬಿಟ್ಟೆ !!! ********************* ಗಿಡ ಬಾಡಿದರೆ ನೀರು ಬಿಡುವೆನು . ಹೃದಯ ಬಾಡಿದರೆ ಕಣ್ಣೀರು ಬಿಡುವೆನು. ನೀವು ಬಾಡಿದರೆ ಜೀವವನ್ನೇ ಬಿಡುವೆನು. ನೀವು ಖುಷಿಯಾಗಿರಲು ಆಗಾಗ ಈ ಥರ. ಸಣ್ಣ 'ರೀಲ್' ಬಿಡುವೆನು!!!!! ********************** ಗಿಡ ಬಗ್ಗದ್ದು ಮರ ಬಗ್ಗೀತೇ ? ಟೀಚರ್ : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? ಸ್ಟೂಡೆಂಟ್ : ಯಾಕಾಗಲ್ಲ ಟೀಚರ್ ? ಚಿಕ್ಕವಯಸ್ಸಿನಲ್ಲಿ ಬಗ್ಗದ ನಮ್ಮ ಅಜ್ಜ ಈಗ ತುಂಬಾ ಬಗ್ಗಿದ್ದಾರೆ !!! ********************** ಮೊಮ್ಮಗ : ಅಜ್ಜ, ನಿಮ್ಮ ಪೆನ್ಷನ್ನಿಂದ ನಂಗೆ 500 ರೂ. ಸಾಲ ಕೊಡಿ ಅಜ್ಜಾ...... ಅಜ್ಜ : ಯಾವಾಗ ವಾಪಸ್ ಕೊಡುತ್ತೀ ? ಮೊಮ್ಮಗ : ನಂಗೆ ಪೆನ್ಷನ್ ಬರುವಾಗ ! ****************** ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ? ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ? ಗುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ? ******************* ಮಗ : ಅಪ್ಪಾ ಇಲ್ಲಿ ಬಾ.... ಅಮ್ಮ : ಮಗೂ ಅಪ್ಪನನ್ನ ಹಾಗೆಲ್ಲಾ ಕರೆಯಬಾರದು. ಮರ್ಯಾದೆಯಿಂದ ಕರೆಯಬೇಕು ತಿಳೀತಾ ? ಮಗ : ಅಪ್ಪಾ..... ಮರ್ಯಾದೆಯಿಂದ ಇಲ್ಲಿ ಬಾ !!! ******************* ಇರುವೆಗೆ ಹಾಕೋ ಪೌಡರ್ ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ ******************* ಸರ್ದಾರ್ ; ನಾನು ಒಳಗೆ ಬರಬಹುದ ಸರ್ ಇಂಟರ್ ವ್ಯೂ ಆಫೀಸರ್ ; ವೈಟ್ ಪ್ಲೀಸ್ ಸರ್ದಾರ್ ; 75 kg ಸರ್ ******************* ಕೆಂಪು ಗುಲಾಬಿ ಕೆಂಪು ಗುಲಾಬಿ ಕೊಟ್ಟು ಅವನು ಹೇಳಿದ "ನಾ ನಿನ್ನ ಪ್ರಿಯತಮ" ಅದಕ್ಕೆ ಅವಳು ಕೆಂಪು ರಾಖಿ ಕಟ್ಟಿ ಹೇಳಿದಳು "ನೀ ನನ್ನ ಪ್ರಿಯ ತಮ್ಮ" ******************* ಕಾಫಿ ಬಾರ್ ಮತ್ತು ವೈನ್ ಬಾರ್ ಕಾಫಿ ಬಾರ್ಗೂ ಮತ್ತು ವೈನ್ ಬಾರ್ಗೂ ಏನ್ ವ್ಯತ್ಯಾಸ ? ಎಲ್ಲಾ ಪ್ರೀತಿಗಳು ಕಾಫಿ ಬಾರ್ನಲ್ಲಿ ಪ್ರಾರಂಭವಾಗಿ ವೈನ್ ಬಾರ್ನಲ್ಲಿ ಮುಕ್ತಾಯವಾಗುತ್ತದೆ !!! ******************* ಟ್ಯಾಕ್ಸಿ ಬಾಡಿಗೆ ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು: ಕುಡುಕ: ಬಾಡಿಗೆ ಎಷ್ಟಾಯ್ತು ? ಡ್ರೈವರ್: ಇಪ್ಪತ್ತು ರೂಪಾಯಿ ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ. ಡ್ರೈವರ್: ಇದು ಹತ್ತು ರೂಪಾಯಿ ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ??? ******************* ಸಂತಾ ಮೊತ್ತಮೊದಲ ಬಾರಿಗೆ ಕಳ್ಳತನ ಮಾಡಲು ಹೋದ ಕನ್ನ ಹಾಕಿ ಒಳ ನುಗ್ಗಿದ್ದೇ ಮನೆಯೊಡೆಯನಿಗೆ ಎಚ್ಚರವಾಯಿತು. 'ಯಾರು ?' ಎಂದು ಕೇಳಿದ ಮನೆಯೊಡೆಯ ಗದರಿಸುವಿಕೆಯ ಧ್ವನಿಯಲ್ಲಿ 'ಮಿಯಾಂವ್' ಎಂದ ಸಂತಾ 'ಯಾರು ?' ಎಂದು ಇನ್ನೂ ಗಟ್ಟಿಯಾಗಿ ಕೇಳಿದ ಯಜಮಾನ. 'ಮಿಯಾಂವ್ ಮಿಯಾಂವ್' ಎಂದ ಸಂತಾ. ! 'ಯಾರು..... ಹೇಳಿ ? ' ಎಂದ ಯಜಮಾನ ಇನ್ನೂ ಗಟ್ಟಿಸ್ವರದಲ್ಲಿ 'ಬೆಕ್ಕು.... ಬೆಕ್ಕು' ಎಂದ ಸಂತಾ ಮೆಲುದನಿಯಲ್ಲಿ !! ******************* ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ. ನಾನು ಅವಳಿಗೆ I LOVE U ಅಂತ ಹೇಳಿದ್ರೆ, ಅವಳು ಹೇಳಿದಳು ...I LOVE U 2 ಅಂತ. ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!! ******************* ನಾರದನ ಕಿತಾಪತಿ ! ನಾರದ ಹೇಳಿದ : ನಿಮ್ಮ ಪ್ರೇಯಸಿ ನಿಮಗೆ ರೋಮ್ಯಾಂಟಿಕ್ ಮೆಸೇಜ್ ಕಳಿಸಿದ್ರೆ ಖುಷಿಪಡಿ. ಆದರೆ, . . ಒಮ್ಮೆ ಯೋಚಿಸಿ ಆ ಮೆಸೇಜ್ನ್ನು ನಿಮ್ಮ ಪ್ರೇಯಸಿಗೆ ಯಾರು ಕಳಿಸಿದ್ದು ಎಂದು ??? ನನ್ನ ಕೆಲಸ ಮುಗಿಯಿತು.... ನಾರಾಯಣ...... ನಾರಾಯಣ !!! ******************* ಸರದಾರ್ ಜೂಸ್ ಬಾಟಲನ್ನೆ ಬಹಳ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದದ್ದನ್ನು ಕಂಡು ಮತ್ತೊಬ್ಬ ಯಾಕೆಂದು ಕೇಳಿದ.ಅದಕ್ಕೆ ಸರ್ದಾರ್ ಹೇಳಿದ `ಅದರಮೇಲೆ CONCENTRATE ಅಂತ ಬರೆದಿದೆ?` ************* ನ್ಯಾಯಾಧೀಶ: ಹೋಗೀ ಹೋಗೀ ದೇವಸ್ಥಾನಕ್ಕೇ ಕನ್ನ ಹಾಕಿದ್ಯಲ್ಲಯ್ಯಾ? ಕಳ್ಳ: ಅಂಗಲ್ಲ ಸಾಮೀ, ಯಾವ್ದಾದ್ರೂ ಕೆಲ್ಸ ಸುರು ಮಾಡೋವಾಗ ದೇವ್ರಿಂದಾ ತಾನೇ ಸುರು ಅಚ್ಕೋಬೇಕೂ? ************* ಹೆಂ: ( ಮಧ್ಯ ರಾತ್ರಿ) ರೀ ಏನೋ ಶಬ್ಧ ಆಯ್ತು, ಅಲ್ಲ ಕಳ್ಳ ಏನಾದ್ರೂ,,,?!!! (ಸೋಮಾರಿ) ಗಂ: ಏ ಕಳ್ಳ ಬಂದ್ರೆ ಶಬ್ಧ ಎಲ್ಲಿ ಮಾಡ್ತಾನೆ? ಸುಮ್ನೆ ಮಲ್ಕೊಳೇ,,,, (ತುಸು ನಿಮಿಷದ ಬಳಿಕ) ಹೆಂ: ರೀ ಈಗ ನೋಡಿ ಶಬ್ಧಾನೇ ಬರ್ತಿಲ್ಲಾ? ಕಳ್ಳ ಬಂದಿರ್ಬೇಕು ಎದ್ದು ಹೋಗಿ ನೋಡ್ರಿ! ************* ಹೆಂಡತಿಗೆ ಡ್ರೈವಿಂಗ್ ಕಲಿಸಿಕೊಡುವ ಮುನ್ನ ಗಂಡ ವಿವರಿಸಲು ಹೊರಟ ’ನೋಡು ಚಿನ್ನಾ ಇದು ಕ್ಲಚ್ಚು,ಇದು ಬ್ರೇಕೂ,ಇದು ಅಕ್ಸ್ಲ್ ಲೇಟರ್ರು,ಇದು ಹಾರನ್ನು’ ಹೆಂಡತಿ: (ರೇಗಿ) ರೀ ಅದೆಲ್ಲಾ ಇರಲಿ ಮೊದಲು ಡ್ರೈವಿಂಗ್ ಕಲಿಸಿರಿ **************** ನೆಹರು ಹುಚ್ಚಾಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ರಂತೆ. ಬಾಗಿಲಿನಲ್ಲೇ ಒಬ್ಬಾತ ಅವರನ್ನು ನಿಲ್ಲಿಸಿ " ಯಾರು ನೀನು ? " ಅಂದ. ಅದಕ್ಕೆ ಅವ " ನಾನು ಭಾರತದ ಪ್ರಧಾನಿ, ನೆಹರು "ಅಂದ . ಹುಚ್ಚ ನಕ್ಕು " ನಾನೂ ಇಲ್ಲಿಗೆ ಬಂದಾಗ ಹೀಗೇ ಹೇಳ್ತಿದ್ದೆ,ಒಳಗೆ ಹೋಗು ಎಲ್ಲ ಸರಿ ಮಾಡ್ತಾರೆ,ಕರ್ಕೊಂಡು ಹೋಗ್ರಿ ಇವನನ್ನ " ******************* ಕೊಲೆ, ಸುಲಿಗೆ ಮಾಡಿದ್ದ ಖದೀಮನಿಗೆ ನ್ಯಾಯಾಲಯ ಎಲೆಕ್ಟ್ರಿಕ್ ಕುರ್ಚಿಯಲ್ಲಿ ಕೂಡಿಸಿ ವಿದ್ಯುತ್ ಹರಿಸಿ ಪ್ರಾಣ ತೆಗೆಯುವ ಶಿಕ್ಷೆ ಕೊಟ್ಟಿತು. ಆ ಕೆಲಸ ಮಾಡುವ ಮೊದಲು ಅಂದರೆ ಆತ ಸಾಯುವ ಮುನ್ನ ಕಡೇಯದಾಗಿ ಹೇಳಲು ಏನಾದರೂ ಇದೆಯಾ ಎಂದು ಕೇಳಿದಾಗ ಆತ ‘ನನಗೆ ಕರೆಂಟ್ ಅಂದರೆ ಭಯ ನೀವೂ ನನ್ನ ಕೈ ಹಿಡಿದುಕೊಳ್ತೀರಾ?’ ******************* ************* ಡಯಟ್ಟು,ವ್ಯಾಯಾಮ ಏನು ಮಾಡಿದರೂ ತೂಕ ಇಳಿಸಲಾರದೆ ಅತಿಯಾದ ಮೈಭಾರವನ್ನೂ ಎತ್ತಲಾರದೆ ಗುಂಡ ಆತ್ಮಹತ್ಯೆಯೇ ಕಡೆಯದಾರಿ ಎಂದು ನಿರ್ಧರಿಸಿ ಎತ್ತರದ ಮಹಡಿಯ ಮೇಲಿಂದ ಧುಮುಕಿದ.ಕಣ್ಣು ಬಿಟ್ಟಾಗ ಡಾಕ್ಟರನ್ನು ಕಂಡು‘ನಾನಿನ್ನೂ ಬದುಕಿದ್ದೀನಾ?’ಎಂದ.ಅದಕ್ಕೆ ಡಾಕ್ಟರ್ ‘ಹೌದಪ್ಪಾ,ಆದರೆ ನೀನು ಯಾರ ಮೇಲೆ ಬಿದ್ದೆಯೋ ಆ ನಾಲ್ವರೂ ಸತ್ತರು’ ************* ‘ಹೌದೂ ಹುಡ್ಗೀಗೆ ಸರ್ಕಾರೀ ಕೆಲಸ,ಅಡುಗೆ ಮಾಡಕ್ಕೆ ಬರತ್ತೆ, ಹಾಡು, ಹಸೆ ಎಲ್ಲಾದ್ರಲ್ಲೂ ನಿಸ್ಸೀಮಳಂತೆ? ಒಳ್ಳೆ ಮನೆತನ ಬೇರೆ ಅದ್ಯಾಕೆ ಲಲಿತಮ್ಮಾವರೇ ಆ ಹೆಣ್ಣು ನಿಮ್ಮ ಮಗನಿಗೆ ಬೇಡಾ ಅಂದ್ರಂತೆ?’ ಹೀಗೆ ಒಂದೇ ಸಮನೆ ಪ್ರಶ್ನೆ ಹಾಕುತ್ತಿದ್ದ ಪಕ್ಕದಮನೆಯಾಕೆಗೆ ಲಲಿತಮ್ಮ ಹೇಳಿದ್ದು ಒಂದೇ ಕಾರಣ‘ ಅಯ್ಯೋ ಅದಷ್ಟೇ ಅಲ್ಲ ಹುಡುಗೀಗೆ ಕರಾಟೇನೂ ಬರತ್ತಂತೆ,ಅದಕ್ಕೆ ಒಪ್ಪಲಿಲ್ಲ’ ****************** ಒಂದು ಹುಡುಗ ಹಾಗು ಒಂದು ಹುಡುಗಿ ಪಾರ್ಕಿನಲ್ಲಿ ಮಾತಾಡ್ತಾ ಇದ್ರು. ಹುಡುಗಿ ಆಸೆಯಿಂದ ಐಸ್ಕ್ರೀಮ್ ಬೇಕೂಂತ ಕೇಳಿದಳು. ಹುಡುಗ ಐಸ್ಕ್ರೀಮ್ ತಂದುಕೊಟ್ಟ. ಹುಡುಗಿ: ತುಂಬಾ ಥ್ಯಾಂಕ್ಸ್ ಕಣೋ... ಹುಡುಗ: ಬರೀ ಥ್ಯಾಂಕ್ಸಾ? ಹುಡುಗಿ: ಕಿಸ್ಸ್ ಬೇಕಾ? ಹುಡುಗ: ಓಹೋಹೋ....ಏನ್ ದೊಡ್ಡ ಐಶ್ವರ್ಯ ರೈ ಇವ್ಳು ಐಸ್ ಕ್ರೀಮ್ ಕೊಡ್ಸಿ ಕಿಸ್ಸ್ ಪಡೆಯೋಕೆ. ಮೊದ್ಲು ಐಸ್ ಕ್ರೀಮ್ ಕಾಸು ಕೊಡೆ...ಕಿಸ್ಸು ಪಸ್ಸು ಎಲ್ಲಾ ಆಮೇಲೆ! ***************** ವಿಸ್ಕಿ+ ನೀರು = ಹ್ರದಯಕ್ಕೆ ಹಾನಿ ರಮ್+ನೀರು= ಲಿವರ್ ಗೆ ಹಾನಿ ಬ್ರಾ೦ದಿ+ನೀರು = ಕಿಡ್ನಿಗೆ ಹಾನಿ ................. ನನಗನಿಸುತ್ತೆ.... ಈ ನೀರು ಇದ್ಯಲ್ಲ ತು೦ಬಾ ಡೇ೦ಜರು, ಯಾವುದರ ಜೊತೆ ಸೆರಿದ್ರೂ ಆರೋಗ್ಯನ ಹಾಳು ಮಾಡುತ್ತೆ..... ಫುಲ್ ಕುಡಿಬೇಕಿತ್ತು ! ****************** ಮಗ :- ಅಮ್ಮಾ ನಿನ್ನೆ ನನಗೊ೦ದು ಕನಸು ಬಿದ್ದಿತ್ತು. ಅಮ್ಮ :- ಏನದು ? ಮಗ :- ಕನಸಲ್ಲಿ ನನ್ನ ಒ೦ದು ಕಾಲು ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು. ಅಮ್ಮ :- ಈ ತರ ಕನಸು ಕಾಣ್ಬೇಡ ಮಗನೆ , ಇರೋ ಒ೦ದು ಚಡ್ಡೀನೂ ಹರಿದೋಗುತ್ತೆ. *************** ಡಾಕ್ಟರ್: ನೀವು ಬುದ್ಧಿವಂತರೇ? ಸರ್ದಾರ್ಜಿ: ಹೌದು. ಡಾಕ್ಟರ್: ಹಂಗಾದ್ರೆ ನಿಮ್ಗೆ ಹಲ್ಲಿಲ್ಲದ ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ? ಸರ್ದಾರ್ಜಿ: ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತಗೋತೀನಿ.. **************** ಪ್ರಶ್ನೆ : ನಿಜವಾದ ಭಾರತೀಯ ಯಾರು? ಉತ್ತರ: ರಾಜೀವ ಗಾಂಧಿ. ಪ್ರಶ್ನೆ: ಯಾಕೆ? ಉತ್ತರ: 'ಭಾರತೀಯರೆಲ್ಲಾ ನನ್ನ ಸಹೋದರ ಸಹೋದರಿಯರು' ಅನ್ನುವ ಧ್ಯೇಯ ವಾಕ್ಯವನ್ನು ಪಾಲಿಸಿದ ನಾಯಕ ಅವರು, ಆದ್ದರಿಂದಲೇ ವಿದೇಶಿಯಳನ್ನು ಮದುವೆ ಆದ್ರು!! **************** ನಿರ್ಮಾಪಕ : ನಾನು ಎಲ್ಲರ ಹೃದಯಕ್ಕೆ ಹತ್ತಿರವಾಗುವಂಥ ಒಂದು ಸಿನಿಮಾ ಮಾಡಬೇಕೆಂದಿದ್ದೇನೆ, ಹೆಸರು ಹೇಳಿ. ಗುಂಡ : 'ಸ್ಟೆಥೆಸ್ಕೋಪ್'!!! ***************** ಬ್ಯಾಂಕ್ ಬೀಗದ ಕೈ ಹುಡುಗಿ - 1: ನನ್ನ ಪ್ರಿಯತಮ ಅಂದ್ರೆ ನನಗೆ ತುಂಬ ಇಷ್ಟ, ಯಾಕೆ ಗೊತ್ತಾ? ಅವನ ಹತ್ತಿರ ೫ ATM card ಇದೆ..... ! ಹುಡುಗಿ - 2: ಅಷ್ಟೇನಾ, ನನ್ನ ಪ್ರಿಯತಮನ ಹತ್ತಿರ ಮೂರು ಬ್ಯಾಂಕ್ನ್ ಬೀಗದ ಕೈ ಇದೆ..... ! ಹುಡುಗಿ- ೧: ಅವರು ಬ್ಯಾಂಕ್ Ownerರ ! ಹುಡುಗಿ- ೨: ಅಲ್ಲ ಅವರು ಬ್ಯಾಂಕ್ "WATCHMAN" !!! **************** ಇಷ್ಟೆ ಅವನು ಹೇಳಿದ್ದು ಇಷ್ಟೆ ಐ ಲವ್ ಯು ಮಾಯ //ವ್ಹಾ ವ್ಹಾ// ಅವನು ಹೇಳಿದ್ದು ಇಷ್ಟೆ ಐ ಲವ್ ಯು ಮಾಯ //ವ್ಹಾ ವ್ಹಾ// ಆಗಿದ್ದು ಇಷ್ಟೆ ಮುಖದ ಮೇಲೆ ಗಾಯ. ************ ಒಂದಿನ ಗುಂಡ jurassic park ಸಿನಿಮಾ ನೋಡಲು ಹೋದ. Dinosaur ನೋಡಿ ಭಯದಿಂದ ನಡುಗುತ್ತಿದ್ದ ಗುಂಡನನ್ನು ಕಂಡಾತ “ಎನ್ರೀ ಸಾಮ್ರಾಟರೇ, ಯಾಕ್ರೀ ಹಾಗೆ ನಡುಗುತ್ತಾ ಇದ್ದೀರಾ ಇದು ಬರೇ ಸಿನಿಮಾ ಕಣ್ರೀ” ಎಂದ ಗುಂಡ ಉತ್ತರಿಸುತ್ತ, “ಅಯೋ ಇದು ಸಿನಿಮಾ ಅಂತ ನನಗೊತ್ತು ನಿಮಗೆ ಗೊತ್ತು ಆದರೆ ಆ ಪ್ರಾಣಿಗಳಿಗೇನ್ ಗೊತ್ತು ಇದು ಸಿನಿಮಾ ಅಂತ?” **************** ವೆಂಕ ಕುಡಿದು ಮನೆಗೆ ಬರುತ್ತಿದ್ದನು. ಜೋರಾಗಿ ಮಳೆ ಬಂತು. ಚರಂಡಿಯಲ್ಲಿ ಬಿದ್ದನು! ಕೆಲ ಹೊತ್ತಿನಲ್ಲಿ ಸಿಡಿಲಿನ ಬೆಳಕು ಕಂಡಿತು. ದೇವರ ಕಡೆಗೆ ನಮಸ್ಕರಿಸುವವನಂತೆ, ಆಗಸದತ್ತ ಕೈಮುಗಿದು ವೆಂಕ ಅಂದನು- “ದೇವರೇ! ಮಳೆ ಬೀಳಿಸಿ, ನನ್ನನ್ನು ಜಾರಿಸಿದ್ದಿ! ಮೇಲಾಗಿ, ನನ್ನ ಫೋಟೋ ಏಕೆ ತೆಗೆಯುತ್ತಿ?” ************** ಒಂದು ಸಲ ಗುಂಡ ಮ್ಯೂಸಿಯಂ ಒಂದಕ್ಕೆ ಭೇಟಿ ನೀಡಿದ್ದರು. ಯಾವುದೋ ವಸ್ತುವನ್ನು ಗಾಢವಾಗಿ ಅಧ್ಯಯನ ಮಾಡುವಾಗ ಅದರ ಪಕ್ಕದಲ್ಲಿದ್ದ ಶಿಲ್ಪವೊಂದರ ಮೇಲೆ ಒರಗಿದರು. ಆ ಶಿಲ್ಪ ಗುಂಡನ ಭಾರವನ್ನು ತಡೆಯಲಾರದೆ ಕೆಳಕ್ಕುರುಳಿದರೆ, ಅದು ಗುಂಡನ ತಪ್ಪೇ? ಮ್ಯೂಸಿಯಮ್ಮಿನ ಮ್ಯಾನೇಜರ್ ಬಂದು, ‘ರೀ ಮಿಸ್ಟರ್ ನೀವು ಈಗ ಒಡೆದು ಹಾಕಿದ ಶಿಲ್ಪ ಸಾವಿರ ವರ್ಷ ಹಳೆಯದು ಅಂತ ಗೊತ್ತೇ?’ ಎಂದು ದಬಾಯಿಸಿದ. ಗಾಬರಿಯಾಗಿದ್ದ ಗುಂಡ ನಿಟ್ಟುಸಿರು ಬಿಡುತ್ತಾ, ‘ಓ ಹೌದಾ, ನಾನೆಲ್ಲೋ ಹೊಸಾದೇನೋ ಅಂದುಕೊಂಡಿದ್ದೆ.’ ಎಂದರು.

-------------------------------orchid-a---------------------------------------------------------------------------


ಮೇಸ್ಟ್ರು ::ಲೇ ಸಿದ್ದ ಹೇಳೊ ಲಿಂಗದಲ್ಲಿ ಎಷ್ಟು ವಿಧ ? ಸಿದ್ದ :: ಮೇಸ್ಟ್ರೆ ಆರು ವಿಧ . ಮೇಸ್ಟ್ರು : ಅದ್ಯಾವದೊ ಆರು ವಿಧ ! ಸಿದ್ದ : ಪುಲ್ಲಿoಗ , ಸ್ತ್ರೀಲಿಂಗ , ನಪುಂಸಕಲಿಂಗ , ನಾನ್ ಸಿದ್ದಲಿಂಗ , ನೀವ್ ಗುರುಲಿಂಗ , ಮತ್ತೆ ಶ್ರೀಲಂಕದ ಬೋಲರ್ ಮಲಿಂಗ

-------------------------------------orchid-a--------------------------------------------------------------

ಒಬ್ಬ ಹುಡುಗ ಮಳೆಯಲ್ಲಿ ನೆನಿತಾ ಇದ್ದ, ಆಗ ಒಬ್ಬ ಹುಡುಗಿ ಛತ್ರಿ ಹಿಡ್ಕೊಂಡು ಹೋಗ್ತಾ ಇದ್ದಳು...🌧 ಹುಡುಗಿ : ಬನ್ನಿ... ಯಾಕೆ ನೆನಿತಾ ಇದಿರಾ....☔ ಹುಡುಗ : ಪರವಾಗಿಲ್ಲ.. ಹುಡುಗಿ : ಅಯ್ಯೊ.. ಬನ್ನಿ, ನನಗೇನು ಅಭ್ಯಂತ್ರ ಇಲ್ಲ...🚻 ಹುಡುಗ : ಪರವಾಗಿಲ್ಲ ಬಿಡಿ, ನಾನು ಹಾಗೆ ಹೋಗ್ತಿನಿ..🚹 ನೀತಿ :..... . . . . ಏನ್ ನೀತಿನೂ ಇಲ್ಲ.. ಫಿಗರ್ ಚೆನ್ನಾಗಿರಲಿಲ್ಲ ಅಷ್ಟೆ

------------------------------orchid-a-------------------------------------------

ಒಂದು ಹುಡ್ಗ ಹುಡ್ಗಿ ಭಯಂಕರ Love ಮಾಡ್ತಾ ಇರ್ತಾರೆ. ಒಂದು nice morning ಹುಡ್ಗಾ Bike ಲೀ ಬರ್ತಾ ಇರ್ಬೇಕಾದ್ರೆ Truck accident ಲೀ ಹುಡ್ಗ Spot ಲೀ ಸತ್ತೋಗ್ತಾನೆ ....!!!!!! ಹುಡ್ಗಿ ಗೆ ವಿಷಯ ಗೊತ್ತಾಗಿ ಸಿಕ್ಕ ಪಟ್ಟೆ ಅಳ್ತಾಳೆ. ಅವಳು ಅವನ ರಕ್ತ ಸಿಕ್ತಾವಾದ Shirt ನು ತಂದು ಅವನ ನೆನಪಿಗೊಸ್ಕರ ಬೀರುವಿನಲ್ಲಿ ತೆಗೆದಿಡ್ತಾಳೆ. ಅವಳಿಗೆ ಯಾವಾಗಲು ಅವನದೇ ನೆನಪು. ಒಂದು ದಿನ ರಾತ್ರಿ ಹುಡುಗಿಯ ಕನಸಿನಲ್ಲಿ ದೇವತೆ ಬಂದು ಹುಡುಗಿಗೆ ಹೇಳ್ತಾಳೆ "ಮಗಳೇ, ಅಳಬೇಡ,ನಿನ್ನ ದುಃಖ ನಾನು ಬಲ್ಲೆ, ನೀನು ಈಗ ಬೀರುವಿನಲ್ಲಿ ಇಟ್ಟ ನಿನ್ನ ಪ್ರಿಯತಮನ ಬಟ್ಟೆಯನ್ನು ರಕ್ತದ ಕಲೆ ಹೋಗುವಂತೆ ಚೆನ್ನಾಗಿ ತೊಳೆ ..ಆಮೇಲೆ ನೋಡು .ಆಮೇಲೆ ನಿನ್ನ ಹುಡುಗ ಹುಟ್ಟಿ ಬರುತ್ತಾನೆ .." ಎಂದು ಹೇಳಿ ಮಾಯವಾಗುತ್ತಾಳೆ. ಹುಡುಗಿಗೆ ಖುಷಿಯಾಗಿ ಬೀರುವಿನಲ್ಲಿದ್ದ ಆತನ ಬಟ್ಟೆ ತೆಗೆದು ಚೆನ್ನಾಗಿ wash ಮಾಡುತ್ತಾಳೆ. ರಕ್ತದ ಕಲೆ ಹಾಗೇ ಇರುತ್ತೆ ... ಬ್ಲೀಚಿಂಗ್ powder ಹಾಕಿ wash ಮಾಡುತ್ತಾಳೆ ರಕ್ತದ ಕಲೆ ಹೋಗೋದಿಲ್ಲ ...!! Petrol ಹಾಕಿ wash ಮಾಡ್ತಾಳೆ ಕಲೆ ಮಾತ್ರ ಹೋಗಲ್ಲಾ ... ಬಟ್ಟೆಯನ್ನು ನೀರಿಗೆ ನೆನೆಸಿ ಎತ್ತಿ ಎತ್ತಿ ಕಲ್ಲಿಗೆ ಒಗೆಯುತ್ತಾಳೆ ..!! ಬಟ್ಟೆ ಹರಿದೆ ಹೋಗುತ್ತೆ ...!!! ಹುಡುಗಿ ಜೋರಾಗಿ ಅಳುತ್ತಾ ಕೂರುತ್ತಾಳೆ .. ಆಗ ದೇವತೆ ಪ್ರತ್ಯಕ್ಷ ಆಗಿ ಹುಡುಗಿಯ ತಲೆಯನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಹೇಳುತ್ತಾಳೆ. "ಅಳಬೇಡ ಮಗಳೇ ...ನಿನ್ನ ಸಂಕಟ ನಾನು ಬಲ್ಲೆ .. ಅದಕ್ಕೆ ಹೇಳೋದು ಮನೇಲಿ ಯಾವಾಗ್ಲೂ "Surf exel ..!!!" ಇಟ್ಕೊಂಡಿರಬೇಕು ಅಂತ ....!!!"😂😂😂

------------------------------------orchid-a-------------------------------------------------------------


ಒಬ್ಬನೇ ಮಗಾ, ದೊಡ್ಡ ಆಸ್ತಿ, ಅತ್ತೆ ಮಾವ ಕಿರಿ ಕಿರಿ ಇಲ್ಲ ಆದ್ರೂ ಆ ಹುಡುಗನ್ನ ಒಲ್ಲೆ ಅಂತಿಯಲ್ಲ ಮಗಳೆ..! ನಾ ಒಲ್ಲೆ ಅಂದಿದ್ದು ಆ ಊರಾಗ ಜಿಯೋ ನೆಟ್'ವರ್ಕ ಬರಂಗಿಲ್ಲ ಅದಕ್ಕ ಯಪ್ಪಾ..! ಎಂತ #ಕರ್ಮ_ಮಾರ್ರೆ..!!


----------------------------------orchid-a----------------------------------------------------------


ನನಗೆ ಕೆಲವೊಂದ್ ಸಲ ಹತ್ ಹುಡುಗಿರು ಒಂದೇ ಸಲ ತಿರುಗಿ ನೋಡಿದ್ರು ಏನು ಅನ್ಸಲ್ಲ. ಆದರೆ ಬೈಕ್ ಮೇಲೆ ಎಣ್ಣೆ ತರಬೇಕಾದರೆ ಬಾಟಲ್ ಗೆ ಬಾಟಲ್ ಗೆ ತಾಗಿ ಪ್ರತಿಸಲ "ಟಳ್" ಅಂದಾಗಲೆಲ್ಲಾ ಜೀವ "ಝಲ್" ಅಂತದೆ! 😒 😒 #ಒಡೆಯದಿರಲಿ_ಗೆಳೆಯ 😒 #ಇರುವುದೊಂದೆ_ಹೃದಯ 😜


-------------------------orchid-a-------------------------------------------------------------------------

🙎🏻ಹೆಣ್ಣುಮಕ್ಕಳಿಗೆ ಮೂಗಿನ ಮೇಲೆ ಕೋಪ ಅಂತ ಮುಗುತಿ ಹಾಕ್ತಾರೆ... ಚಂಚಲ ಸ್ವಭಾವ ಅಂತ ಕಾಲಿಗೆ ಕಾಲುಂಗರ ಹಾಕ್ತಾರೆ...
ಅಹಂಕಾರದಿಂದ ಕಿವಿ ಕೆಳಸಲ್ಲ ಅಂತ,ಕಿವಿ ಚುಚ್ಚುತ್ತಾರೆ...
ನೀರಿನಲ್ಲಿ ಮೀನಿನ ಹೆಜ್ಜೆ ಶಬ್ದ ಕೆಳಿಸುತ್ತೆ, ಹೆಣ್ಣಿನ ಹೆಜ್ಜೆ ಶಬ್ದ ಕೆಳಿಸಲ್ಲ ಅಂತ ಕಾಲಿಗೆ ಗೆಜ್ಜೆ ಹಾಕ್ತಾರೆ... ಹೆಣ್ಣುಮಕ್ಕಳು ಅಸಭ್ಯವಾಗಿ ನಡೆಯಬಾರದು ಅಂತ ಮಾಂಗ್ಯಲ್ಯ, ಅರಿಶಿಣ, ಕುಂಕುಮ ಅನ್ನೋ ಆಭರಣ, ಹಾಕ್ತಾರೆ...🙎🏻
🙎🏻‍♂ಗಂಡ್ಮಕ್ಕಳಿಗೆ ಇದಾವುದು ಬೇಡ ಅಂತ ಹೆಣ್ಣುಮಕ್ಕಳನ್ನ ಗಂಟುಹಾಕ್ತಾರೆ.💐👫💐
"ಪ್ರೀತಿ" ಇರೋ  ಕಡೆ  "ಸ್ನೇಹ" ಇರಲ್ಲ.
.
"ಸ್ನೇಹ" ಇದ್ದ ಕಡೆ  "ಪ್ರೀತಿ " ಇರಲ್ಲ.
.
ಯಾಕೆ  ಗೊತ್ತಾ?
ಸ್ನೇಹ  ಸೈನ್ಸ್ ಕಾಲೇಜ್ ಗೆ  ಹೋಗ್ತಾಳೆ.
.
ಪ್ರೀತಿ  ಇಂಜಿನಿಯರಿಂಗ್  ಕಾಲೇಜ್  ಗೆ  ಹೋಗ್ತಾಳೆ.
-----------Orchid---------------
ಒಬ್ಬ ಹುಡುಗನೆದುರಿಗೆ ದೇವರು ಪ್ರತ್ಯೇಕ್ಷವಾಗಿ ಏನು ವರ ಬೇಕೆಂದು ಆ ಹುಡುಗನನ್ನು ಕೇಳುತ್ತದೆ.                                           ಹುಡುಗ:- ಭಾರತದಿಂದ ಅಮೇರಿಕಕ್ಕೆ ಒಂದು ರಸ್ತೆಯನ್ನು ಮಾಡಿಕೊಡು.                                                                       ದೇವರು:- ಅದು ತುಂಬಾ ಕಷ್ಟ...... , ಬೇರೆನಾದ್ರು ಬೇಡಿಕೋ....                                                 ಹುಡುಗ:- ಹಾಗದ್ರೆ ಒಬ್ಬನೇ  ಹುಡುಗನನ್ನು ಪ್ರಾಮಾಣಿಕವಾಗಿ ಪ್ರೀತಿಸುವಂತೆ ಎಲ್ಲಾ ಹುಡುಗಿಯರನ್ನು ಪರಿವರ್ತಿಸು.                                                                      ದೇವರು:- (ತಕ್ಷಣ) ಅಮೇರಿಕಕ್ಕೆ ಸಿಂಗಲ್ ರೋಡ್ ಬೇಕಾ, ಇಲ್ಲ ಡಬ್ಬಲ್ ರೋಡ್ ಬೇಕಾ.......‌                         ದೇವರಿಗೂ ಗೊತ್ತಾಗಿದೆ ಕಣ್ರಿ, ಪ್ರಪಂಚದಲ್ಲಿ  ಯಾರ್ ಮನಸ್ಸನ್ನ ಬೇಕಾದ್ರೂ ಬದಲಾಯಿಸಬಹುದು ಆದ್ರೆ ಹುಡುಗಿಯರ ಅಂತರಾಳವನ್ನು ತಿಳಿದುಕೋಳ್ಳಲು ಮತ್ತು  ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ... ಅಂತ.                                                                                              
-------Orchid-a------
ಧಾರವಾಡ್ ಕನ್ನಡ ದಾಗ್ english ಫಿಲಮ್ಸ್ ಡಬ್ ಮಾಡಿದ್ರ  ಹೆಸರು ಹಿಂಗ್ ಇರಬಹುದು?
DIE ANOTHER DAY
ಇನ್ನೊಂದ್ ದಿನಾ ಶಟದ್ ಹೊಗ್ಲೆ!
GONE WITH THE WIND-
ಘಾಳ್ಯಾಗ್ ಗೆ೦ವ್ವ್ವ್ ಅಂತ ಹೋತು
SUPERMAN
ಅಗದೀ ಮಸ್ತ್ ಮನಷ್ಯಾ
SCORPION KING-
ಚೇಳು ರಾಜ್ಯಾ
THE MUMMY
ಎವ್ವಾ!!!
THE MUMMY RETURNS
ಅವ್ವಾ ವಾಪಸ್ ಬಂದ್ಲು
MISSION IMPOSSIBLE
ಆಗಂಗಿಲ್ಲ
MISSION IMPOSSIBLE II
ಹೋಯ್ಕೊಂಡ್ರೂ ಆಗಂಗಿಲ್ಲಾ
MISSION IMPOSSIBLE III -
ಲಬೋ ಲಬೋ ಹೋಯ್ಕೊಂಡ್ರೂ ಆಗಂಗಿಲ್ಲಾ
IRON MAN
ಇಸ್ತ್ರೀ ಮಾಮಾ
------Orchid-a------
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..
ಗುಂಡ : " ಕರ್ಕೊಂಡ್ ಬನ್ನಿ,
ಹೊತ್ಕಂಡ್ ಹೋಗಿ,
ಹಣ ನಮಗೆ,
ಹೆಣ ನಿಮಗೆ " I
-----Orchid-a--------
TVವರದಿಗಾರನೊಬ್ಬ ರೈತನ Live ಸಂದರ್ಶನ ಮಾಡುತ್ತಿದ್ದ.
ವರದಿಗಾರ: ನಿವು ಕುರಿಗೆ ಯೇನು ತಿನ್ನಿಸ್ತೀರಿ?
ರೈತ: ಬಿ ಳಿಕುರಿಗೋ? ಕರೆ ಕುರಿಗೋ?
ವರದಿಗಾರ: ಬಿಳಿ.
ರೈತ: ಹುಲ್ಲು....
ವರದಿಗಾರ: ಮತ್ತೆ ಕರೇದಕ್ಕೆ?
ರೈತ: ಅದಕ್ಕೂ ಹುಲ್ಲು...
ವರದಿಗಾರ: ನೀವು ಈ ಕುರಿಗಳನ್ನಾ ಯೆಲ್ಲಿ ಕಟ್ತೀರಿ?
ರೈತ: ಕರೇದನ್ನೋ? ಬಿಳೇದನ್ನೋ?
ವರದಿಗಾರ: ಬಿಳೇದು...
ರೈತ: ಹೊರಗಿನ ಕೋಣೆಯಲ್ಲಿ..
ವರದಿಗಾರ: ಕರೇದನ್ನಾ..?
ರೈತ: ಅದನ್ನೂ ಹೊರಗಿನ ಕೋಣೆಯಲ್ಲಿಯೇ...
ವರದಿಗಾರ: ಮತ್ತೆ ಅವುಗಳಿಗೆ ಸ್ನಾನಾ ಮಾಡ್ಸೋದು ಹೇಗೆ?
ರೈತ: ಕರೇದಕ್ಕೋ? ಬಿಳೇದಕ್ಕೋ...?
ವರದಿಗಾರ: ಬಿಳೇದಕ್ಕೆ...
ರೈತ: ನೀರಿನಿಂದ...
ವರದಿಗಾರ: ಕರೇದಕ್ಕೆ...?
ರೈತ: ಅದಕ್ಕೂ ನೀರಿಂದಲೇ...
ವರದಿಗಾರನಿಗೆ ಕೋಪ ನೆತ್ತಿಗೇರಿತು, ಕಿರುಚವಂತೇ ಹೇಳಿದ: ಮೂರ್ಖ! ಯೆರಡಕ್ಕೂ ವಂದೇರೀತಿ ಮಾಡೋದು ಅಂದ್ಮೇಲೆ ಪದೇ ಪದೇ ಕರೇದೊ ಬಿಳೇದೋ ಅಂತಾ ಯಾಕಯ್ಯಾ ಕೇಳ್ತಿದ್ದೆ?
ರೈತ: ಯಾಕಂದ್ರೆ... ಕಪ್ಪು ಕುರಿ ನಂದು....
ವರದಿಗಾರ: ಮತ್ತೆ ಬಿಳೇದು...?
ರೈತ: ಅದೂ...ನಂದೇ!...
ವರದಿಗಾರ ಮೂರ್ಛೆಹೋದ!!!
ಪ್ರಜ್ಞೆ ಬಂದಮೇಲೆ ರೈತ ಹೇಳಿದ, ಈಗ ಗೂತ್ತಾಯ್ತಾ? TVಲಿ ನೀವು ಅದೇ ಅದೇ ಸಮಾಚಾರಾನಾ ಮತ್ತೆ ಮತ್ತೆ ತಿರ್ಗಾ ಮುರ್ಗಾ ತೋರ್ಸೀ ತೋರ್ಸೀ ನಮ್ತಲೇ ತಿಂತೀರಲ್ಲಾ ಆವಾಗಾ ನಮ್ಗೂ ಹೀಗೇ ಆಗುತ್ತೆ......!
   ☝
--------Orchid-a---------
"ಸಮಾಜಕ್ಕೆ" ಹೆದರಿ ಯುವತಿ ನೇಣಿಗೆ ಶರನಾಗಿದ್ದಾಳೆ...
?
?
?
ಅಲ್ಲೊ ಬಸ್ಯಾ ಸಮಾಜಕ್ಕ ಹೀಂಗ ಆದ್ರ್ "ಗಣಿತಕ್ಕ"ಹೇಂಗೊ ಮಾರಯ್ಯನ
----------Orchid-a----------
Constable : ಸಾರ್..   ಖೈದಿಗಳು ನಿನ್ನೆ ಜೈಲಲ್ಲಿ 'ರಾಮಾಯಣ' ನಾಟಕ ಮಾಡಿದ್ರು..!!
Officer : So what..??
Constable : ಏನಿಲ್ಲ ಸಾರ್...
     'ಸಂಜೀವಿನಿ' ತರೋದಕ್ಕೆ ಕಾಂಪೌಂಡ್ ಹಾರಿ ಹೋದ ಹನುಮಂತ ಇನ್ನೂ ಬಂದಿಲ್ಲ ಸಾರ್...
----------Orchid-a-------
ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಇದ್ದಿದ್ರೆ
Freedom 251 ಮೊಬೈಲ್ ದರಪಟ್ಟಿ ಹೀಗಿರ್ತಿತ್ತು.
General.   : Rs.251
OBC.         : Rs.175
Minorities: Rs.50
SC/ST.      : Free (+10 rs. Recharge)
-----------Orchid-a-------
ಗಿರಾಕಿ: ಒಂದು kg ಚಿಪ್ಸ್ ಗೆ ಎಷ್ಟು?
ವ್ಯಾಪಾರಿ : 80 ರುಪಾಯಿ.
ಗಿರಾಕಿ : ಲೂಸ್  ತಗೊಂಡ್ರೆ?
ವ್ಯಾಪಾರಿ : ಯಾರ್ ತಗೊಂಡ್ರು ಅಷ್ಟೇ.
----------Orchid-a-----
ಬಾಸ್ ತನ್ನ ಸಕ್ರೇಟರಿಗೆ ಹೇಳ್ತಾನೆ "ನಾವು ಒಂದು ವಾರ ಅಬ್ರಾಡ್ ಗೆ ಟೂರ್ ಹೋಗ್ತಾ ಇದ್ದೀವಿ"
.
ಸಕ್ರೇಟರಿ ತನ್ನ ಗಂಡನಿಗೆ ಫೋನ್ ಮಾಡಿ: ಒಂದು ವಾರ ನಾನು ಅಬ್ರಾಡ್ ಗೆ ಟೂರ್ ಹೋಗ್ತಿದ್ದಿನಿ.
.
ಗಂಡ ತನ್ನ ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಒಂದು ವಾರ ಮನೆಯಲ್ಲಿ ಇರೋದಿಲ್ಲ, ನಾನು ನೀನು ಎನ್ ಜಾಯ್ ಮಾಡಬಹುದು.
ಗರ್ಲ್ ಫ್ರೆಂಡ್ ಅವಳ ಸ್ಟೂಡೇಂಟ್ ಗೆ ಕಾಲ್ ಮಾಡಿ: ಒಂದು ವಾರ ನಿನಗೆ ಯಾವ ಕ್ಲಾಸ್ ಕೂಡ ಇಲ್ಲ.
.
ಆ ಪುಟ್ಟ ಹುಡುಗ ತನ್ನ ತಾತನಿಗೆ ಕಾಲ್ ಮಾಡಿ: ನನಗೆ ಈ ವಾರ ಪೂರ್ತಿ ಕ್ಲಾಸ್ ಇಲ್ಲ, ನಾನು ಮನೆಯಲ್ಲೇ ಇರ್ತಿನಿ.
.
ತಾತ(ಬಾಸ್) ಅವರ ಸಕ್ರೇಟರಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್, ನಾನು ಈ ವಾರ ಪೂರ್ತಿ ನನ್ನ ಮೊಮ್ಮಗನ ಜೊತೆ ಇರ್ತೀನಿ.
.
ಸಕ್ರೇಟರಿ ತನ್ನ ಗಂಡನಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್ ಆಯ್ತು...
.
ಗಂಡ ತನ್ನ ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಹೋಗ್ತಾ ಇಲ್ಲ, ಸೋ ನಾವು ಎಲ್ಲೂ ಹೋಗೋಕೆ ಆಗೋಲ್ಲ.
.
ಗರ್ಲ್ ಫ್ರೆಂಡ್ ಆ ಹುಡುಗನಿಗೆ ಕಾಲ್ ಮಾಡಿ: ಈ ವಾರ ನಿನಗೆ ಮಾಮೂಲಿಯಂತೆ ಕ್ಲಾಸ್ ಗಳು ಇದಾವೆ…
.
ಹುಡುಗ ತನ್ನ ತಾತನಿಗೆ ಕಾಲ್ ಮಾಡಿ: ಸಾರಿ ತಾತ, ಈ ವಾರ ನನಗೆ ಎಲ್ಲ ಕ್ಲಾಸ್ ಗಳು ಇದಾವೆ.
ತಾತ, ಸಕ್ರೇಟರಿಗೆ ಫೋನ್ ಮಾಡಿ: ನಾವು ಅಬ್ರಾಡ್ ಗೆ ಹೋಗ್ತಾ ಇದ್ದೀವಿ;(
ಗೊಂಬೆ ಆಡ್ಸೋನು ಮೇಲೆ ಕುಂತವ್ನೇ;(((husharu)))
-------------Orchid-a---------
ಸೇಲ್ಸ್ ಗರ್ಲ್ ಅನ್ನು ಕನ್ನಡದಲ್ಲಿ ಏನೆಂದು ಕರೆಯಬಹುದು?
ಉತ್ತರ: "ಮಾರಮ್ಮ".
------Orchid-a-------
ಕನ್ನಡ ಹೆಚ್ಚು ಕಮ್ಮಿ ಆದ್ರೆ ಪ್ರಾಣನೆ   ಹೋಗುತ್ತೆ.      
ಧಾರವಾಡ್ ಮೇಸ್ಟ್ರು: ನಮ್ ಮನ್ಯಾಗ   12 ಎಮ್ಮಿ  ಅದಾವ , ಅದ್ರಾಗ   ನಾ ಕೆಮ್ಮಿ ಸತ್ರ  ಎಸ್ಟ್  ಉಳಿತಾವ್?  
ಗುಂಡ:  12 ಎಮ್ಮಿ.                  ಮೇಸ್ಟ್ರು:  ಅದ್  ಹೆಂಗೋ ?.                     ಗುಂಡ:  ನೀವ್  ಕೆಮ್ಮಿ ಸತ್ರ ಎಮ್ಮಿ ಯಾಕ್ ಕಡಿಮಿ   ಅಗ್ತಾವ್ರಿ ಸರಾ .
-----------Orchid-a---------
ಭಯಂಕರ ಸೀರಿಯಸ್ ಕಥೆ ಮಾರ್ರೆ.
ಸಕಲೇಶಪುರದ ಹರೀಶ ಬಹಳ ಒಳ್ಳೆಯ ಹುಡುಗ,
ಹುಡುಗರೆಂದರೆ ಸಾಮಾನ್ಯವಾಗಿ ಒಳ್ಳೆಯವರೇ ಬಿಡಿ ಕೆಲವು
ಬಾರಿ ಹುಡುಗಿಯರ ಸಂಗದಿಂದ ಹಾಳಾಗ್ತಾರೆ ಬಿಟ್ರೆ,
ಇಲ್ಲದೇ ಇದ್ರೆ ಚಿಪ್ಪಿನೊಳಗಿರುವ ಮುತ್ತಿನಂತೆ!
ಈ ಹರೀಶನು ಕೂಡಾ ತುಂಬಾ ಮುಗ್ಧ. ತನ್ನ ಉನ್ನತ
ವ್ಯಾಸಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ
ಹೊರಟ.
ಮಂಗಳೂರು ವಿ.ವಿ ಯ ಹುಡುಗರ ಹಾಸ್ಟೆಲ್ನಲಿ ರೂಮು ಸಿಗದ
ಕಾರಣ, ಅಸೈಗೋಳಿ ಕಾಜವ ಕೌಂಪೌಂಡ್ ಅಲ್ಲಿ ರೂಮು ಬಾಡಿಗೆಗೆ
ಪಡೆದ. ಹಾಗೂ ತನ್ನ ದಿನನಿತ್ಯದ ತರಗತಿಗೆ ಅಲ್ಲಿಂದಲೇ
ಹೋಗಿ ಬರುವುದು ಮಾಡುತ್ತಿದ್ದ. ಹೀಗೇ ಇರಬೇಕಾದರೆ
ತನ್ನದೇ ರೂಮಿನ ಎದುರು ಭಾಗದಲ್ಲಿರುವ
ಮನೆಯೊಂದರ ಹುಡುಗಿ ಜ್ಯೋತಿಯ
ಪರಿಚಯವಾಗುತ್ತದೆ. ಪರಿಚಯ ಸ್ನೇಹವಾಗಿ, ಸ್ನೇಹ
ಪ್ರೀತಿಗೆ ತಿರುಗಿ ಇಬ್ಬರೂ ಗಾಢವಾಗಿ ಪ್ರೀತಿಸಲು
ಪ್ರಾರಂಭಿಸುತ್ತಾರೆ . ಜ್ಯೋತಿ ಮದ್ಯಮ ವರ್ಗದ
ಕುಟುಂಬದ ಹುಡುಗಿ, ಅಣ್ಣಾ ಬಸ್ ಕಂಡೆಕ್ಟರ್, ಅಪ್ಪ
ತೀರಿ ಹೋಗಿದ್ದರು. ತಂಗಿಯನ್ನು ಬಹಳ
ಪ್ರೀತಿಯಿಂದ ಸಾಕಿದ್ದ ಅಣ್ಣನಿಗೆ ಜ್ಯೋತಿ
ಆಕೆಯ ಪ್ರೀತಿಯ ಬಗ್ಗೆ ತಿಳಿಸಿರಲಿಲ್ಲ
ಯಾಕೆಂದರೆ ಹರೀಶನ ಜಾತಿ ಬೇರೆ ಆದದ್ದರಿಂದ
ಅಂತರ್ಜಾತಿ ವಿವಾಹಕ್ಕೆ ಒಪ್ಪಲಾರರು ಎಂಬ
ಅಭಿಪ್ರಾಯ.
ಒಂದು ದಿನ ಜ್ಯೋತಿ ತನ್ನ ಮೊಬೈಲ್ ಅನ್ನು
ಇಟ್ಟು ಸ್ನಾನಕ್ಕೆ ಹೋಗಿದ್ದ ಸಂಧರ್ಭ ಅಣ್ಣ ಆಕೆಯ
ಮೊಬೈಲ್ ತೆರೆದಾಗ ಆಕೆಯ ಪ್ರೇಮ ಪ್ರಕರಣ
ಹೊರ ಬೀಳುತ್ತದೆ. ಆಕೆ ಹರೀಶನ
ಜೊತೆ ಮನೆ ಬಿಟ್ಟು ಓಡಿ ಹೋಗುವ ನಿರ್ಧಾರ ಮಾಡಿದ
ವಿಚಾರವನ್ನು ತಿಳಿದು ಕೆಂಡಾಮಂಡಲನಾದ ಅಣ್ಣ, ಆಕೆಯ
ಬಳಿ ಯಾವ ವಿಚಾರವನ್ನು ಕೇಳೋಲ್ಲ. ಆದರೆ ಅವರು ಮನೆ ಬಿಟ್ಟು
ಓಡುವ ದಿನ ಗೊತ್ತುಪಡಿಸಿ ಅಂದು ರಜೆ ಹಾಕಿ
ಅಸೈಗೋಳಿ ಜಂಕ್ಷನ್ ಅಲ್ಲಿ ಕಾದು ಕುಳಿತ.
ಆಕೆ ತನ್ನ ಮರ್ಯಾದೆ ತೆಗೆದಳು ಇಬ್ಬರನ್ನೂ ಮುಗಿಸಿಬಿಡುವೆ
ಎಂದು ಕಬ್ಬಿಣದ ರಾಡು ಹಿಡಿದು ಆಕೆಯ ಅಣ್ಣ
ಹೊಂಚು ಹಾಕಿ ಕುಳಿತಿದ್ದ . ಇತ್ತ ಹರೀಶ
ಮೊದಲೇ ನಿರ್ಧಾರವಾದಂತೆ ಕೊಣಾಜೆಯ
ಹುಡುಗನಿಂದ ಬೈಕ್ ಒಂದನ್ನು ಪಡೆದು ಜ್ಯೋತಿಯ ಪಿಕಪ್
ಮಾಡಿದ ,ಅವರು ಅಸೈಗೋಳಿ ದಾಟಿ ಒಂದು ಚೂರು ಮುಂದೆ
ಸಾಗುತ್ತಿದ್ದಂತೆ ಹಿಂದಿನಿಂದ ಆಕೆಯ ಅಣ್ಣ ತನ್ನ
ಕೈಲಿದ್ದ ಕಬ್ಬಿಣದ ರಾಡಿನಿಂದ ಜ್ಯೋತಿಯ ತಲೆಗೆ ಬಲವಾದ
ಏಟು ಕೊಟ್ಟಿದ್ದ. ಆತನಿಂದ ಬಿದ್ದ ಏಟಿಗೆ ಆಕೆ
ಬದುಕುಳಿವುದೇ ಅನುಮಾನ.
ಆದರೂ ಏನೂ ಆಗಿಲ್ಲ ,ಯಾಕೆ ಗೊತ್ತಾ ? ಇದು ಕರ್ಣಾಟಕ
ಸ್ವಾಮಿ, ಇಲ್ಲಿ ಹಿಂಬದಿಯ ಸವಾರನಿಗೂ ಹೆಲ್ಮೆಟ್
ಕಡ್ಡಾಯ. ಆಕೆಯೂ ಹೆಲ್ಮೆಟ್ ಧರಿಸಿದ್ದಳು .ಬಿದ್ದ ಏಟಿಗೆ
ಹೆಲ್ಮೆಟ್ ಒಡೆಯಿತೇ ಹೊರತು ತಲೆ ಏನೂ ಆಗಿಲ್ಲ
.ಒಂದು ಹೆಲ್ಮೆಟ್ ಹುಡುಗಿಯ ಜೀವ ಹಾಗೂ ಪ್ರೇಮ
ಉಳಿಸಿತು.
ಕಥೆಯ ನೀತಿ : ಹೆಲ್ಮೆಟ್ ಧರಿಸಿರಿ ಹುಡುಗಿಯರ ತಲೆ
ಉಳಿಸಿ
-------Orchid-a-----------
ಮರೆಯಲಾಗದ ಶಾಲಾ ಜೀವನ ದ ದಿನಗಳು
200 ಪುಟದ ಗೆರೆ -6
200 ಪುಟದ ಖಾಲಿ -3
ಮೂರು ಗೆರೆ ಕಾಪಿ ಪುಸ್ತಕ-1
ನಾಲ್ಕು ಗೆರೆ ಕಾಪಿ ಪುಸ್ತಕ-1
  ಎರಡು ಗೆರೆ ಕಾಪಿ ಪುಸ್ತಕ  -1
100 ಪುಟದ ಗೆರೆ ಪುಸ್ತಕ -6
ಕಂಪಾಸ್-1
ಅಡಿಕೋಲು-1
ರಬ್ಬರ್-1
ಪೆನ್ಸಿಲ್-1
ಬಣ್ಣದ ಪೆನ್ಸಿಲ್ -1 ಪ್ಯಾಕ್
ಅಂದು ತರಗತಿಯಲ್ಲಿ ಟೀಚರ್ ಹೆಳುತ್ತಿದ್ದ ಕೆಲವು ಡೈಲಾಗ್ ಗಳು:
ಪಾಠ ಕೇಳಲು ಇಷ್ಟ ಇಲ್ಲದವರಿಗೆ ಧಾರಾಳವಾಗಿ ಹೊರಗೆ ಹೋಗ್ಬಹುದು
ಯಾಕೆ ಒಬ್ಬನೇ ನಗ್ತಾ ಇದ್ದೀಯಾ?  ಇಲ್ಲಿ ಬಂದು ಹೇಳು, ನಾವೆಲ್ರೂ ನಗ್ತೀವಿ
ನಿಮ್ಮ ಬೊಬ್ಬೆ ಅಲ್ಲಿ ಆಫೀಸ್ ರೂಂ ತನಕ ಕೆಳ್ತಾ ಉಂಟು
ನೀವೆಲ್ಲಾ ಬಂದಿರೋದು ಕಲಿಲಿಕ್ಕೆ ಅಲ್ಲ, ನಿಮ್ಮ ಅಪ್ಪ ಅಮ್ಮನ ದುಡ್ಡು ವ್ಯರ್ಥ ಮಾಡೋದಕ್ಕೆ
ಇದು ಕ್ಲಾಸಾ..ಅಲ್ಲ ಮೀನು ಮಾರ್ಕೆಟಾ?
ಕಳೆದ ವರ್ಷದ ವಿದ್ಯಾರ್ಥಿಗಳು ಎಷ್ಟು ಡೀಸೆಂಟಾಗಿದ್ರು ಗೊತ್ತಾ?
ಕೊನೇಯ ಒಂದು ಡೈಲಾಗ್
ನೀನೆ.. ನೀನೆ... ಯಾಕೆ ಹಿಂದೆ ತಿರುಗಿ ನೋಡ್ತೀಯಾ? ನೀನೆ.. ನಿಂತ್ಕೊ..
ನಮಗೆ ಉತ್ತಮವಾದ ವಿದ್ಯೆ ನೀಡಿ ನಮ್ಮ ಜೀವನಕ್ಕೆ ದಾರಿ ದೀಪವಾದ ನಮ್ಮ ಎಲ್ಲಾ ಅಧ್ಯಾಪಕರನ್ನು ಆ ದೇವರು ಚೆನ್ನಾಗಿಟ್ಟಿರಲಿ..
--------Orchid---------
ಯಾವ್ದೋ ಸ್ಕೂಲ್ ಬಸ್ ಫುಲ್ ರಶ್ ಇತ್ತು.ಇಬ್ರು ಹುಡುಗ್ರು ಇಳ್ಕಂಡ್ ಬೆವ್ರ್ ಒರ್ಸ್ ಕಳ್ತಾ ಇದ್ರು..
.
.
.
.
"ಶಾಲೀ-ವಾಹನ-ಶೆಕೆ" ಅಂತ ಚಿಕ್ಕವ್ನಿದ್ದಾಗ ಪಂಚಾಗದಲ್ಲಿ ಓದ್ತಾ ಇದ್ದಿದ್ರ ಅರ್ಥ ಇವತ್ ಗೊತ್ತಾಯ್ತು
--Orchid-a--
2 Devva galu matadkotidvu
.
.
Devva 1 : Nin heg sattode?
Devva 2 : Refrigerator olagade idde tumba chali
inda sattogbitte ....ninu?
Devva 1 : guru nan kathe yak keltiya che.....
nan hendti mele doubt bantu bere boyfnd idane
avlge anta..... adke sudden agi mane ge entry
kottu mane full check mad'de....bt yaru
siglilla.....adke nan mele nange jigupse bandu
sucide madkonde.....
.
.
.
.
Devva 2 : Ayyo dabba nanmagne....refrigerator
door open madididre ibru baduktidvallo
---Orchid-a---
ಹೆಣ್ಣು ನೋಡಲು ಹೋದ ಯುವಕ ನೊಂದಿಗೆ ಹೆಣ್ಣಿನ ತಂದೆ ಕೇಳಿದರು.
ಉದ್ಯೋಗ ಏನು ?
ಯುವಕ ; administrator
"ಯಾವ ಕಂಪನಿಯಲ್ಲಿ ?"
ಯುವಕ :ಕಂಪನಿಯಲ್ಲ.ಸದ್ಯಕ್ಕೆ ಎರಡು ವಾಟ್ಸಪ್ ಗ್ರೂಪ್ ಗಳ
administrator ಆಗಿದ್ದೇನೆ.
----Orchid-a----
ನಾಸಾ ರಾಕೇಟ್ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಬ್ಲಾಸ್ಟ್ ಆಯ್ತು.
ಜಪಾನ್: ಟೆಕ್ನಾಲಜಿಯನ್ನ ಚೆಕ್ ಮಾಡಿದ್ರಾ…?
ನಾಸಾ: ಹೌದು
ರಷ್ಯಾ: ಕ್ರಿಸ್ಟಲ್ ಮಾಸ್ ವಾಲ್ಯೂಮ್ ಚೆಕ್ ಮಾಡಿದ್ರಾ…?
ನಾಸಾ: ಹೌದು
ಯುರೋಪ್: ಡಿಸೈನ್ ಚೆಕ್ ಮಾಡಿದ್ರಾ…?
ನಾಸಾ: ಹೌದು
ಭಾರತ: ನಿಂಬೆ ಹಣ್ಣು ಕಟ್ಟಿ, ಕುಂಬಳಕಾಯಿ ಹೊಡೆದಿದ್ರಾ…?
ನಾಸಾ: ಇಲ್ಲ
ಭಾರತ: ನನ್ ಮಕ್ಳ ಸಾಯ್ರಿ, ಅದಕ್ಕೇನೆ ಹಿಂಗಾಗಿದ್ದು.
----------orchid-a-------
ಸರ್: ಭಾರತದಲ್ಲಿ
ಮೊಟ್ಟ ಮೊದಲು ಸುರಂಗಮಾರ್ಗ ಕಂಡುಹಿಡಿದವರು
ಯಾರು???
ಗುಂಡ:-)  Hegna.
------------Orchid-a-----------
Girl : cigarette bidu
Boy: okay
Girl : Kudiyod na bidu
Boy: aytu
Girl: iwat inda no stuffs
Boy: ok, no stuffs
Girl: dina sanje temple ge hogu
Boy: inmele daily temple fix
Girl: o my jaanu, i love you a lot,
       Nanna madwe aagu
Boy: ad agala hogele....
Girl : yaake.
Boy: ist olle hudga admele,  nange nin ginta chenagiro hudgeene biltaale
.
.
.
.
Men Will Be Men✌
--------Orchid-a------
android j -jelly bean
android k-kitkat
android l -lollipop
android m-marshmellow
android n -
NAN MAGAND!!!!!
---------------Orchid------------
Chotu: Amma ninu nange sullu helidiya......
Mom : I told to u every time please speak in English.
Chotu : Ok Mom u lied to me.
Mom : When my son. ?
Chotu : U said that my younger sis is an angel.
Mom : Yes, she is
Chotu : So why didn't she fly when I threw her from our
balcony.
Mom : ayyo!!!! Bevarsi!!!! Yello yesde maguna?????
Son : Talk in English Mom.. I was just kidding....
Ganchalli bidi Kannada mathadi!
"Kannada rajyothsavada haardhika shubhashayagalu"..
---------Orchid------------
ಕುಡುಕನೊಬ್ಬ 98.3 FM ರೇಡಿಯೋಗೆ ಕಾಲ್ ಮಾಡಿದ.
ಕುಡುಕ : ನಮಸ್ಕಾರ ಸಾ.. ನಂಗೆ M.G. ರೋಡ್ ಲ್ಲಿ ಒಂದು ಪರ್ಸ್ ಸಿಕ್ಕಿದೆ. ಅದರಲ್ಲಿ 15 ಸಾವಿರ ಕ್ಯಾಷ್, ಒಂದು iPhone 5s, ಒಂದು ಕ್ರೆಡಿಟ್ ಕಾರ್ಡ್, ಜೊತೆಗೆ ಯಾರೋ ಪಲ್ಲವಿ ಜೋಶಿಯ ಹೆಸರಲ್ಲಿ ಒಂದು ಐಡಿ ಕಾರ್ಡ್ ಸಿಕ್ಕಿದೆ
ರೇಡಿಯೋ ಜಾಕಿ: ಸರ್.. ನಿಮ್ಮಂತ ಪ್ರಾಮಾಣಿಕರು ತುಂಬಾ ಕಮ್ಮಿ! ನೀವು ಅವರಿಗೆ ವಾಪಸ್ ತಲುಪಿಸಲಿಕ್ಕೆ ನಮಗೆ ಕಾಲ್ ಮಾಡಿದ್ರಿ ಅಲ್ವೇ?
ಕುಡುಕ : ಇಲ್ಲಾ ಸಾ..! ...
ಪಾಪ.. ಪಲ್ಲವಿ ಜೋಶಿಯವರಿಗೋಸ್ಕರ ತುಂಬಾ ದು‌‌‌‌‌‌‌‌‌:ಖದ ಹಾಡು ಒಂದು ಹಾಕ್ಬಿಡಿ ಸರ್
-----------Orchid-------------
Teacher : Yakappa exam
                 hallinalli wisky
                 bottle itkondu
                 kutidiya?
Student : Nive helidralla
                 madam prati
                 examnallu
                 minimum 90
                 tagobeku
                 anta.....!!!!
Dnt laugh alone.... fwd it to ur friends
------------Orchid------------
ಜೋತಿಷಿ :- ನಿನ್ನ ಹೆಸರು ಗವಿಯಪ್ಪ, ನಿನಗೆ 54 ವರ್ಷ.
ಗವಿಯಪ್ಪ :- ಸರಿ ಸ್ವಾಮಿ, ಕರೆಟ್ಟು.
ಜೋತಿಷಿ :- ಜಲಜ ನಿನ್ನ ಹೆಂಡತಿ.
ಗವಿಯಪ್ಪ :- ಹೌದು ಬುದ್ದಿ.
ಜೋತಿಷಿ :- ನಿನಗೆ 2 ಗಂಡು 1 ಹೆಣ್ಣು  ,ಒಟ್ಟು  ಮೂರು ಮಕ್ಕಳು.
ಗವಿಯಪ್ಪ :- ಕರೆಟ್ಟು ಬುದ್ದಿ,
ಜೋತಿಷಿ :- ನಿನ್ನ ತಾಯಿ ನಿನ್ನ ಜೊತೆಯಲ್ಲಿದ್ದಾರೆ.
ಗವಿಯಪ್ಪ :- ಸತ್ಯವನ್ನೇ ಹೇಳಿದಿರಿ ಸ್ವಾಮಿ.
ಜೋತಿಷಿ :- ನಿನ್ನೆ ನೀನು 15 ಕೆ.ಜಿ ಅಕ್ಕಿ, 3 ಕೆ.ಜಿ. ಸಕ್ಕರೆ ತರಲಿಲ್ಲವಾ.
ಗವಿಯಪ್ಪ :- ದಿಟ ಸ್ವಾಮಿ, ಆಶ್ಚರ್ಯ ಗುರುಗಳೇ ...ಎಲ್ಲಾ ಹೇಳಿಬಿಟ್ಟರಲ್ಲ..
ಜೋತಿಷಿ :-ಹುಚ್ಹ ಸೂಳೆಮಗನ ಜೋತಿಷಿಗಳ ಹತ್ತಿರ ಬರುವಾಗ ಜಾತಕ ತರಬೇಕು ..ರೇಷನ್ ಕಾರ್ಡ್  ಅಲ್ಲಾ.
---------Orchid-------------
ಎಕ್ಸಾಮ್ ನ ಹಿಂದಿನ ದಿನ ರಾತ್ರಿ ನಾಲ್ಕು ಜನ
ಗೆಳೆಯರು ಫುಲ್ ಟೈಟ್ ಆಗಿ ಓದದೆ ಹಾಗೆಯೇ
ಮಲಗಿಬಿಟ್ಟರು
ಮರುದಿನ ಎಕ್ಸಾಮ್ ಹಾಲ್ ಗೆ ಹೋಗದೆ ನೇರವಾಗಿ
ಪ್ರಿನ್ಸಿಪಾಲರ ಬಳಿ ಹೋದರು
ಗೆಳೆಯ ೧ : ಸರ್ ನಿನ್ನೆ ರಾತ್ರಿ ನಾವು
ದೇವಸ್ಥಾನದಿಂದ ಬರುವಾಗ ನಮ್ಮ ಕಾರ್ ಪಂಚರ್
ಆಗಿ ನಾವು ರಾತ್ರಿಯೆಲ್ಲ ಕಾರ್ ನ ತಳ್ಳಿ ಕೊಂಡು
ಬಂದ ಕಾರಣ ಈಗ ನಾವು ಪರೀಕ್ಷೆ ಬರೆಯಲು
ಸಿದ್ಧರಿಲ್ಲ, ,ದಯವಿಟ್ಟು ನಮಗೆ ಇನ್ನೊಂದು ದಿನ
ಅವಕಾಶ ಕೊಡಿ.
ಪ್ರಿನ್ಸಿಪಾಲ್ : ಸರಿ ನಿಮಗೆ ನಾಡಿದ್ದು ಎಕ್ಸಾಮ್
ಇರತ್ತೆ ಓದ್ಕೊಂಡ್ ಬನ್ನಿ.
ಎರಡು ದಿನಗಳಿಂದ ಹುಡುಗ್ರು ತುಂಬಾ
ಓದಿಕೊಂಡು ಪರೀಕ್ಷೆಗೆ ಬಂದರು, ನಾಲ್ಕು
ಗೆಳೆಯರನ್ನು ನಾಲ್ಕು ಪ್ರತ್ಯೇಕವಾದ
ಕೋಣೆಯಲ್ಲಿ ಕೂರಿಸಲಾಗಿತ್ತು. ಪ್ರಶ್ನೆ ಪತ್ರಿಕೆ
ನೋಡಿ ಹುಡುಗ್ರು ಕಕ್ಕಾಬಿಕ್ಕಿಯಾದರ
ು ಅದರಲಿದ್ದದ್ದು ಕೇವಲ ಒಂದೇ ಪ್ರೆಶ್ನೆ
ಮೊನ್ನೆ ಎಕ್ಸಾಮ್ ನ ಹಿಂದಿನ ರಾತ್ರಿ ನಿಮ್ಮ ಕಾರ್
ನ ಯಾವ ಚಕ್ರ ಪಂಚರ್ ಆಗಿತ್ತು???
A) ಮುಂದಿನ ಎಡ
B) ಮುಂದಿನ ಬಲ
C) ಹಿಂದಿನ ಎಡ
D) ಹಿಂದಿನ ಬಲ
ವಿ.ಸೂಚನೆ: ನಿಮ್ಮ ನಾಲ್ಕು ಜನರ ಉತ್ತರ ಒಂದೇ
ಆದರೆ ಮಾತ್ರ ನೀವು ಪಾಸ್..
Not only Students are smart
Even teachers are smart.
-----------Orchid-----------
ಒಬ್ಬ ಟೀಚರ್ ಗೆ ದೂರದ ಊರಿಗೆ
ವರ್ಗಾವಣೆಯಾಗುತ್ತೆ.
ಆಕೆ ಆ ಊರಿಗೆ ಹೋದಾಗ ಗಂಡನಿಗೆ
ಮೆಸೇಜ್ ಮಾಡ್ತಾಳೆ
ಆ ಮೆಸೇಜ್ ಮಿಸ್ ಆಗಿ
ಬೇರೆಯವನಿಗೆ ಹೋಗುತ್ತೆ.
ಆ ಮೆಸೇಜ್ ಯಾರಿಗೆ ಹೋಗಿತ್ತು ಅಂದ್ರೆ
ಆತ  ಆಗ ತಾನೆ ತನ್ನ ಸತ್ತ ಹೆಂಡತಿಯನ್ನು
ಮಣ್ಣು ಮಾಡಿ ಬಂದಿರುತ್ತಾನೆ.
ತನಗೆ ಬಂದ ಮೆಸೇಜನ್ನು ಓದಿ
ಮೂರ್ಚೆ ಹೋಗುತ್ತಾನೆ.
ಆ ಮೆಸೇಜ್ ನಲ್ಲಿ ಏನಿತ್ತು ಅಂದ್ರೆ
" ರೀ ನಾನು ಇಲ್ಲಿಗೆ ಕ್ಷೇಮವಾಗಿ
ತಲುಪಿದ್ದೇನೆ. ಇಲ್ಲಿ ಟವರ್ ಸರಿಯಾಗಿ
ಸಿಗುತ್ತಿಲ್ಲ , ಅದುಕ್ಕೇ ಪೋನ್ ಮಾಡಲಿಲ್ಲ
ಬೇಜಾರು ಮಾಡ್ಕೋಬೇಡಿ.
ಇನ್ನು ಮೂರ್ ನಾಕ್ ದಿನದಲ್ಲೇ 
ನಿಮ್ಮುನ್ನ ಕರಿಸ್ಕೋತಿನಿ "
-----------Orchid -------------
ಆಧುನಿಕ ರಕ್ಷಾ ಬಂಧನ
ಹುಡುಗಿಯರಿಬ್ಬರು ಮಾತಾಡಿಕೊಳ್ಳುತ್ತಿದ್ದರು....
ಅವಳು : ನನಗೇನೋ ಡೌಟು ಕಣೇ.... ಅವನು ನಿನ್ನನ್ನ ಲವ್ ಮಾಡ್ತಾ ಇದ್ದಾನೇನೋ.... ನಿನ್ನನ್ನೇ ನೋಡ್ತಾ ಇರ್ತಾನೆ.
ಇವಳು : ಹೂ... ನನಗೂ ಡೌಟು ಅದಕ್ಕೇ ಇವತ್ತು ರಕ್ಷಾ ಬಂಧನ ಕಟ್ಟಿ ಬಿಡ್ತೇನೆ...
ಆತ ಸಿಕ್ಕ ಕೂಡಲೇ ರಕ್ಷಾಬಂಧನ ಕಟ್ಟಿಯೇ ಬಿಡುತ್ತಾಳೆ.... ಆಮೇಲೆ
ಅವಳು : ಕಟ್ಟಿದ್ಯಾ.... ರಾಖಿ...
ಇವಳು : ಹೂ.... ಕಟ್ಟಿದೆ...
ಅವಳು : ಮತ್ಯಾಕೆ ಡಲ್ ಆಗಿದೀಯಾ.... ಖುಷೀನೇ ಕಾಣ್ತಾ ಇಲ್ಲ ಮುಖದಲ್ಲಿ....
ಇವಳು : ಹೂ ಕಣೇ ನಾನು ಅವಸರ ಮಾಡಿದೆನೇನೋ ಅನಿಸ್ತಾ ಇದೆ.
ಅವಳು : ಯಾಕೆ ಏನಾಯ್ತು...
ಇವಳು : ಏನಿಲ್ಲಾ... ನಾನು ರಾಖಿ ಕಟ್ಟಿದ್ದಕ್ಕೆ ಆತ ಎರಡು ಸಾವಿರ ರೂಪಾಯಿಯ ಗಿಫ್ಟ್ ಕೊಟ್ಟ ಕಣೇ....
ಅವಳು : ವಾಹ್ ಇನ್ನೂ ಖುಷಿ ಪಡೋ ವಿಚಾರ ಅಲ್ವಾ.... ಮತ್ತೇ ಇನ್ನೂ ನೀನ್ಯಾಕೆ ಡಲ್ ಆಗಿದೀಯ....?
ಇವಳು : ರಾಖಿ ಕಟ್ಟಿದ್ದಕ್ಕೆ ಎರಡು ಸಾವಿರ ರೂಪಾಯಿಯ ಗಿಫ್ಟ್ ಕೊಟ್ಟೋನೋ.... ನಾನು ಲವ್ ಮಾಡಿರ್ತಿದ್ರೆ..... ಅದೆಷ್ಟು ಗಿಫ್ಟ್ ಕೊಡ್ತಿದ್ದನೋ ಏನೋ.... ಅವಸರ ಪಟ್ಟು ಅಷ್ಟೂ ಗಿಫ್ಟನ್ನ ಕಳೆದುಕೊಂಡು ಬಿಟ್ಟೆ ಅನ್ನಿಸ್ತಾ ಇದೆ.
-------------Orchid --------------
? Twist in the tale 
Girl : Hi !
Boy : Hi !!!
Girl : Enaytu?
Boy : Enilla.
Girl : Illa enaytu helu yaako bejaar aagiro haagide.
Boy : Ninge ondu mathu keltini...Nija heltiya ?
Girl : Ha kelu.
Boy : Rajesh anno lofer yaaru ? Nin yella photos gu like madtane stupid nan maga urita ide nange !!
Girl : Pls avna enu baibeda.!
Boy: Ho enu love ah?
Girl : Neen irovaga naan yaake avna love madli?
Boy : Matte brother ah?
Girl : Haagenu illa kano.
Boy : Matte yaar hele nange kopa jaasti aagta ide.
Girl : Pls adondu bittu bere enadru kelu.
Boy : Andre nange helde iro anta relation ah nimdu?
Girl : Illa kano naan helidre baitiya, adkoskara heltilla.
Boy : Muchkond helu tension alli sayta idini eega helde idru baitini.
Girl : Pls kano.
Boy : Eega helilla andre nam love break-up agatte.
Girl : Ayyo heltini adre baibeda pls.
Boy : Bega helu...
Girl : Hmmm.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Adu nande fake profile kano...
Yaaru like madolla, neenu aste, adke naane adralli login aagi like madkolta ideeni.!!!!!
Gud mrng
------------Orchid-------------
Boy- I LOVE YOU, I wil do anything
for u.
Girl- can u
Pass  "ENGINEERING"
without back
Boy- "tangi" rakhi katti
manige hogava,  nimmavva hudukakattala.,
---------Orchid-----------
ಎಕ್ಸಾಮ್ ನ ಹಿಂದಿನ ದಿನ ರಾತ್ರಿ ನಾಲ್ಕು ಜನ
ಗೆಳೆಯರು ಫುಲ್ ಟೈಟ್ ಆಗಿ ಓದದೆ ಹಾಗೆಯೇ
ಮಲಗಿಬಿಟ್ಟರು
ಮರುದಿನ ಎಕ್ಸಾಮ್ ಹಾಲ್ ಗೆ ಹೋಗದೆ ನೇರವಾಗಿ
ಪ್ರಿನ್ಸಿಪಾಲರ ಬಳಿ ಹೋದರು
ಗೆಳೆಯ ೧ : ಸರ್ ನಿನ್ನೆ ರಾತ್ರಿ ನಾವು
ದೇವಸ್ಥಾನದಿಂದ ಬರುವಾಗ ನಮ್ಮ ಕಾರ್ ಪಂಚರ್
ಆಗಿ ನಾವು ರಾತ್ರಿಯೆಲ್ಲ ಕಾರ್ ನ ತಳ್ಳಿ ಕೊಂಡು
ಬಂದ ಕಾರಣ ಈಗ ನಾವು ಪರೀಕ್ಷೆ ಬರೆಯಲು
ಸಿದ್ಧರಿಲ್ಲ, ,ದಯವಿಟ್ಟು ನಮಗೆ ಇನ್ನೊಂದು ದಿನ
ಅವಕಾಶ ಕೊಡಿ.
ಪ್ರಿನ್ಸಿಪಾಲ್ : ಸರಿ ನಿಮಗೆ ನಾಡಿದ್ದು ಎಕ್ಸಾಮ್
ಇರತ್ತೆ ಓದ್ಕೊಂಡ್ ಬನ್ನಿ.
ಎರಡು ದಿನಗಳಿಂದ ಹುಡುಗ್ರು ತುಂಬಾ
ಓದಿಕೊಂಡು ಪರೀಕ್ಷೆಗೆ ಬಂದರು, ನಾಲ್ಕು
ಗೆಳೆಯರನ್ನು ನಾಲ್ಕು ಪ್ರತ್ಯೇಕವಾದ
ಕೋಣೆಯಲ್ಲಿ ಕೂರಿಸಲಾಗಿತ್ತು. ಪ್ರಶ್ನೆ ಪತ್ರಿಕೆ
ನೋಡಿ ಹುಡುಗ್ರು ಕಕ್ಕಾಬಿಕ್ಕಿಯಾದರ
ು ಅದರಲಿದ್ದದ್ದು ಕೇವಲ ಒಂದೇ ಪ್ರೆಶ್ನೆ
ಮೊನ್ನೆ ಎಕ್ಸಾಮ್ ನ ಹಿಂದಿನ ರಾತ್ರಿ ನಿಮ್ಮ ಕಾರ್
ನ ಯಾವ ಚಕ್ರ ಪಂಚರ್ ಆಗಿತ್ತು???
A) ಮುಂದಿನ ಎಡ
B) ಮುಂದಿನ ಬಲ
C) ಹಿಂದಿನ ಎಡ
D) ಹಿಂದಿನ ಬಲ
ವಿ.ಸೂಚನೆ: ನಿಮ್ಮ ನಾಲ್ಕು ಜನರ ಉತ್ತರ ಒಂದೇ
ಆದರೆ ಮಾತ್ರ ನೀವು ಪಾಸ್..
Not only Students are smart
Even teachers are smart.
-------------orchid---------------
Ravana:Bavathi biksham dehi ....
sita: Togoli swamy ....
Ravana: Border line datti baramma..
She came out and while droping the biksha ..
Ravana: ha ha ha ...nanau swami alla...ravana
sita: ha ha ha .. nanu sita alla ..avara mane kelasadavalu......  MUNIYAMMA
-----------Orchid-----------
ಪ್ರಶ್ನೆಪತ್ರಿಕೆಯೊಂದರ ಉತ್ತರ
ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
✏ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್
ಮತ್ತು ಒಂದು ಡಜನ್
ಬಾಳೆಹಣ್ಣು
=
ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
✏ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ,
ಅದು ಭಾರತ...
ಮಿಕ್ಕಿದ್ದೆಲ್ಲಾ ವಿದೇಶ.
=
ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
✏ಉತ್ರ:- ನನ್ನ ಫೇಲ್ ಮಾಡೋಕ್ಕೆ
=
ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ
ಹೊಂದುವ
ದ್ರವ ಯಾವುದು?
✏ಉತ್ರ: - ಇಡ್ಲಿ, ದೋಸೆ
=
ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
✏ಉತ್ರ: - ಗೆದ್ದವರಿಗೆ
=
ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ
ಬರೆಯಿರಿ
✏ಉತ್ರ:- ಮಳೆ ಬಂದ ಕಾರಣ
ಪಂದ್ಯವನ್ನು ರದ್ದುಗೊಳಿಸಲಾಗಿದೆ
=
ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
✏ಉತ್ರ:- ಈಗಲೂ ಬದುಕಿರುತ್ತಿದ್ದರು.
=
ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ
ಏನಾಗುತ್ತದೆ?
✏ಉತ್ರ:- ಕಾಯುತ್ತದೆ.
=
ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ
ಮಾಡಿದರು?
✏ಉತ್ರ:- ಸುಮಾರು 14ನೇ ಪುಟದಿಂದ
22ನೇ ಪುಟಗಳವರೆಗೆ
=
ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
✏ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ
ಅಂತ!
=
ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ,
ಕಿವಿ
ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
✏ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ
ಅವರಿಗೆ ಕೇಳಿಸಲ್ಲ.
=
ಪ್ರಶ್ನೆಪತ್ರಿಕೆಯೊಂದರ ಕೊನೆಯ ಪ್ರಶ್ನೆ:-
ಛಾಲೆಂಜ್ ಅಂದರೆ ಏನು?
ಉತ್ತರ:- ಧಮ್ ಇದ್ರೆ ಪಾಸ್ ಮಾಡು
---------Orchid---------
ತಿಮ್ಮ: ನಿನ್ನ ಸುಖ ದಾಂಪತ್ಯ ಜೀವನದ ಗುಟ್ಟೇನು? ಗುಂಡ: ತಿಂಗಳಿಗೆ ಎರಡು ಸಲ ನಾವು ರಜೆಯಲ್ಲಿ ತೆರಳುತ್ತೇವೆ. ಮೊದಲ 15 ದಿನ ನಾನು ರಜೆಯಲ್ಲಿ ಪ್ರವಾಸಕ್ಕೆ ತೆರಳಿದರೆ, ಉಳಿದ 15 ದಿನ ಅವಳು ರಜೆಯಲ್ಲಿ ತೆರಳುತ್ತಾಳೆ.
-----Orchid-------
ಪ್ರಾಣಿ ಸಂಗ್ರಹಾಲಯದಲ್ಲಿದ್ದ ಆನೆ ಸಾವನ್ನಪ್ಪಿತು. ಗುಂಡ ಒಂದೇ ಸಮನೆ ಅಳುತ್ತಿದ್ದ. ಅಲ್ಲಿಗೆ ಬಂದ ತಿಮ್ಮ ತಿಮ್ಮ: ಯಾಕೋ ಅಳ್ತಾ ಇದ್ದೀಯಾ? ಗುಂಡ: ಆನೆ ಸತ್ತು ಹೋಯ್ತು. ತಿಮ್ಮ: ಆನೆ ಅಂದರೆ ನಿನಗೆ ಅಷ್ಟು ಇಷ್ಟನಾ? ಗುಂಡ: ಇಲ್ಲ.. ತಿಮ್ಮ: ಮತ್ಯಾಕೆ ಅಳ್ತಾ ಇದ್ದೀಯಾ? ಗುಂಡ: ಆನೆ ಸಮಾಧಿ ಮಾಡೋಕೆ ಗುಂಡಿ ತೆಗೀ ಅಂತ ಸಾಹೇಬ್ರು ಹುಕುಂ ಮಾಡಿದ್ದಾರೆ.
----Orchid-------
Jeevanada "kallu-mullina" haadiyalli yaaru nimma joteyaagirtaare?
Tande thaayi?
Illa
Anna, thangi?
Illa
Premi, snehitaru?
Illaa…bari eradu chappaligalu :-)..
------Orchid---------
Surya bandaaga jagakella belaku
Chandra bandaaga beladingala belaku
Yen luck ree nimmadu!?
.
.
.
.
.
.
.
.
.
.
.
.
.
.
Nan msg bandaaga nimma mobile nallu belaku.....Good Morning
--------Orchid---------
Water mele boat horde ULLAASA,
Aadare boat olage water horde KAILASA!
-----Orchid------
Motte idadha hakki yaavudu gottaaaa?
Yochane maadu
Gottilva????????
Sari naane hella?
Adu
Adu
GANDU HAKKI. ha ha ha..
--------Orchid---------
Hakkigalu bere deshagalinda illige haarikondu baruttave…. Yaake gotta?
.
.
.
.
.
.
..
..
.
.
.
.
.
.
.
.
.
.
.
.
.
.
...
.
...
..
.
.
.
.
.
.
.
.
.
Nadedukondu barodikke aagolla adakke
Kopa banta? :-P..
----------Orchid---------
ಅಲ್ಲೊಂದು ಸಂದರ್ಶನ ನಡೆದಿತ್ತು
ಸಂದರ್ಶಕ: ಒಂದು ಏರೋಪ್ಲೇನ್ ನಲ್ಲಿ ಐನೂರು ಇಟ್ಟಿಗೆಗಳಿವೆ. ಅವುಗಳಲ್ಲಿ ಒಂದು ಇಟ್ಟಿಗೆ ಕೆಳಕ್ಕೆ  ಬಿದ್ದರೆ ಎಷ್ಟು ಇಟ್ಟಿಗೆ ಉಳಿಯಿತು
ಅಭ್ಯರ್ಥಿ: 499
ಸಂದರ್ಶಕ: ಜಿಂಕೆಯನ್ನು ಮೂರು ಹಂತಗಳಲ್ಲಿ ಫ್ರಿಡ್ಜ್ ನಲ್ಲಿ ಹೇಗೆ ಇಡುವೆ
ಅಭ್ಯರ್ಥಿ: ಫ್ರಿಡ್ಜ್ ಬಾಗಿಲು ತೆರೆಯುವೆ, ಜಿಂಕೆಯನ್ನಿಡುವೆ, ಬಾಗಿಲು ಮುಚ್ಚುವೆ
ಸಂದರ್ಶಕ: ಗುಡ್, ಆನೆಯನ್ನು ನಾಲ್ಕು ಹಂತಗಳಲ್ಲಿ ಫ್ರಿಡ್ಜ್ ನಲ್ಲಿ ಹೇಗೆ ಇಡುವೆ.
ಅಭ್ಯರ್ಥಿ: ಬಾಗಿಲು ತೆರೆಯುವೆ, ಜಿಂಕೆಯನ್ನು ಹೊರಗೆಳೆಯುವೆ, ಆನೆಯನ್ನು ಒಳಗೆ ಸೇರಿಸುವೆ, ಬಾಗಿಲು ಮುಚ್ಚುವೆ
ಸಂದರ್ಶಕ: ಫೈನ್, ಸಿಂಹ ಒಂದರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ ಒಂದನ್ನು ಬಿಟ್ಟು. ಆ ಪ್ರಾಣಿ ಯಾವುದು ಮತ್ತು ಯಾಕೆ?
ಅಭ್ಯರ್ಥಿ: ಆನೆ, ಯಾಕೆಂದರೆ ಅದು ಫ್ರಿಡ್ಜ್ ನಲ್ಲಿದೆ.
ಸಂದರ್ಶಕ: ವಂಡರ್ ಫುಲ್, ಮೊಸಳೆ ಕಾಟ ಹೆಚ್ಚಿರುವ ಹೊಳೆಯೊಂದನ್ನು ಒಬ್ಬಳು ಮುದುಕಿ ದಾಟಬಲ್ಲಳೇ?
ಅಭ್ಯರ್ಥಿ: ಖಂಡಿತವಾಗಿಯೂ, ಯಾಕೆಂದರೆ ಎಲ್ಲ ಪ್ರಾಣಿಗಳು ಸಿಂಹದ ಹುಟ್ಟುಹಬ್ಬದ ಪಾರ್ಟಿಯಲ್ಲಿವೆ
ಸಂದರ್ಶಕ: ಆದರೂ ಆ ಮುದಕಿ ಸತ್ತುಹೋದಳು ಯಾಕೆ?
ಅಭ್ಯರ್ಥಿ: ಕಾಲು ಜಾರಿ ಹೊಳೆಗೆ ಬಿದ್ದಿರಬಹುದೇ?
ಸಂದರ್ಶಕ: ಇಲ್ಲ, ಏರೋಪ್ಲೇನ್ ನಿಂದ ಬಿದ್ದ ಇಟ್ಟಿಗೆ ತಲೆಗೆ ಬಡಿದು ಸತ್ತಳು. ನೀನಿನ್ನು ಹೋಗಬಹುದು
------Orchid----------
Akkana friend akka aagabahudu
Thangiya friend thangiyaagabahudu
Aadare
Hendatiya friend hendati aagalaaralu..
------Orchid------
Latest  one
ಗಂಡ ಹೆಂಡತಿಯ ಚಿಂತೆ!
ಗಂಡ ಹೆಂಡತಿ ರಾತ್ರಿಯ ಸಮಯದಲ್ಲಿ ಹಾಸಿಗೆ ಮೇಲೆ ಮೌನವಾಗಿ  ಮಲಗ ಿದ್ದರು
ಇಬ್ಬರ ನಡುವೆ ಯಾವ ಮಾತುಕಥೆ ಇಲ್ಲ !!
ಹೆಂಡತಿಯ ಯೋಚನೆ...
೧ ಇವರು ನನ್ನ ಜೊತೆ ಯಾಕೆ ಮಾತನಾಡುತಾ ಇಲ್ಲ?
2 ನನ್ನ ಸೌಂದರ್ಯ ಕಮ್ಮಿ ಆಗಿದೆಯಾ?
3ನಾನೇದರೂ ಡುಮ್ಮಿ ಆಗಿದ್ದೇನಾ?
೪ ಇವರೇನದರೂ ಇನ್ನೊಬ್ಬಳನ್ನು ಇಷ್ಟ ಪಡುತ್ತಾ ಇದ್ದರಾ?
ಗಂಡನ ಚಿಂತೆ
ಕಟ್ಟಪ್ಪ ಯಾಕೆ  ಬಾಹುಬಲಿನ ಕೊಂದ
For more jokes visit
WhatsApp collection http://whatsapplibrary.blogspot.com/
---------Orchid-----------
ಸಿನಿಮಾ ನಟಿ...
ನಮ್ಮ ಬಿಜಾಪುರದ ಗುಂಡನಿಗೆ ರಮ್ಯ (ಸಿನಿಮಾ ನಟಿ) ಎಂದರೆ
ಪಂಚಪ್ರಾಣ..
ಅವಳನ್ನೇ ಮದುವೆ ಆಗಬೇಕು ಅಂತಾ ತುಂಬಾ ಆಸೆ ಇತ್ತು..
ಒಂದು ದಿನ ಧೈರ್ಯ ಮಾಡಿ ಅವಳಿಗೆ ಒಂದು ಪತ್ರ ಬರೆದೇ
ಬಿಟ್ಟ,
" ಪ್ರೀತಿಯ ರಮ್ಯ ಅವರೇ, ನಾನು ನಿಮ್ಮನ್ನು ತುಂಬಾ
ಪ್ರೀತಿ ಮಾಡಕ್ಕತ್ತೀನಿ,
ನಿಮ್ಮನ್ನ ಲಗ್ನ ಮಾಡಿಕೊಬೇಕು ಅಂತಾ ಮನಸ್ಸು
ಮಾಡೀನಿ...
ಈ ಬಗ್ಗೆ ನಿಮ್ಮ ವಿಚಾರ ಏನು ಅದ? ಅಂತಾ ದಯವಿಟ್ಟು ತಿಳಿಸಿ."
ಇದನ್ನು ಓದಿದ ರಮ್ಯಳಿಗೆ ಯಾರಪ್ಪ ಇವನು ಅಂತಾ ಆಶ್ಚರ್ಯ
ಆಯಿತು..
ಇರಲಿ ನೋಡೋಣ ಅಂತಾ ಉತ್ತರ ಬರೆದೇ ಬಿಟ್ಲು.
" ಆಗಲಿ, ಈ ಬಗ್ಗೆ ವಿಚಾರ ಮಾಡಲು ಮೊದಲು ನಿಮ್ಮ ಪಗಾರ
(ಸಂಬಳ) ಎಷ್ಟು ಅಂತಾ ತಿಳಿಸಿ"
ಗುಂಡ ನನಗೆ 5000/- ಸಂಬಳ ಅಂತಾ ಬರೆದು ತಿಳಿಸಿದ.
ರಮ್ಯ ಅವನಿಗೆ "ನಿನ್ನ 5000/- ಸಂಬಳ ನನ್ನ ಒಂದು
ತಿಂಗಳ ಸ್ನಾನದ ಸೋಪಿಗೆ ಸಾಕಾಗಲ್ಲ" ಅಂತಾ ಉತ್ತರ ಬರೆದಳು.
ಅದಕ್ಕೆ ನಮ್ಮ ಬಿಜಾಪುರದ ಗುಂಡ ಉತ್ತರ ಬರೆದು ಕೈಮುಗಿದ
"ನೀನು ಸ್ನಾನ ಮಾಡುವ ಸೋಪಿಗೆ ನನ್ನ 5000/- ಸಂಬಳ
ಸಾಕಾಗಲ್ಲ ಅಂತಾ ಅಂದ್ರ, ನೀನೆಷ್ಟು ಹೊಲಸು
ಇರಬಹುದು?? ನೀನು ನನ್ನ ಲಗ್ನ
ಮಾಡ್ಕೊತ್ತೀನಿ ಅಂದ್ರೂ ನಾನು
ಮಾಡ್ಕೊಳ್ಳೋಲ್ಲ..
"" 2) ಗೋಲ್ ಗುಂಬಜ್
ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್
ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ
ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ
ತಿಳಿಯೋಲ್ಲ ಸಾರ್.. ಅದಕ್ಕೆ.
3) ಹೊಸ ಗಾಂಧಿವಾದ
ನಿಮ್ಮ ಮೇಲೆ ಒಂದು ಕಲ್ಲು ಎಸೆದರೆ, ಅವರ ಮೇಲೆ ಒಂದು ಹೂ
ಎಸೆಯಿರಿ,
ಎರಡು ಕಲ್ಲು ಎಸೆದರೆ, ಎರಡು ಹೂ ಎಸೆಯಿರಿ, ಮೂರನೇ ಕಲ್ಲು ಎಸೆದರೆ..,
ಯೋಚನೆ ಮಾಡದೇ, ಹೂವಿನ ಕುಂಡವನ್ನು ಎಸೆಯಿರಿ...
4) ಗರ್ಲ್ ಫ್ರೆಂಡ್
ನಿಮ್ಮ ಗರ್ಲ್ ಫ್ರೆಂಡ್ ನಿಮಗೆ ರೊಮ್ಯಾಂಟಿಕ್
ಮೆಸೆಜ್ ಕಳಿಸಿದಳು ಅಂತಾ ಖುಶಿ ಪಡಬೇಡಿ, ಅವಳಿಗೆ ಈ ಮೆಸೇಜನ್ನು
ಯಾರು ಕಳಿಸಿದರು ಅಂತಾ ಯೋಚನೆ ಮಾಡಿ....
5)ಸಿಗರೇಟ್
ಟೀಚರ್: ನಿಮ್ಮ ಮಗ ನಿಮ್ಮ ಎದುರಿಗೆ ಸಿಗರೇಟ್ ಸೇದ್ತಾನೆ,,
ನೀವು ಅವನನ್ನು ಕೇಳಲ್ವಾ..??
ಅಪ್ಪ: ಕೇಳ್ತಿನಿ ಸಾರ್.. ಆದ್ರೆ, ಕೊಡಲ್ಲಾ ಅಂತಾನೆ..!!
6) ಮದುವೆ ಸಮಯದಲ್ಲಿ ಮದುವೆ ಗಂಡನ್ನು ಕುದುರೆ ಮೇಲೆ ಯಾಕೆ
ಕೂರಿಸ್ತಾರೆ..??
ಎರಡು ಕಾರಣಗಳು ಇವೆ..
(ಅ) ಕತ್ತೆ ಮೇಲೆ ಕೂರ್ಸಿದರೆ, ಎರಡೂ ಕತ್ತೆಗಳನ್ನು ಒಂದೇ ಬಾರಿ ನೋಡಲು
ಮದು ಮಗಳಿಗೆ ಇಷ್ಟ ಆಗಲ್ಲ ಅಂತಾ.
(ಆ) ಮದು ಮಗನಿಗೆ ಹೆತ್ತವರು ಕೊಡೋ ಕೊನೇ
ಚಾನ್ಸ್.. 'ಓಡೋಗೋಕೆ'
7) ಒಂದು ಸಲಹೆ..
" ನೀವು ಸದಾ ನಗುತ್ತಲೇ ಇರಿ, ನಗುತ್ತಲೇ ಬಾಳಿ ನಗುತ್ತಲೇ ದಿನ
ಕಳೆಯಿರಿ, ನಗುವೇ ಜೀವನ.. ಯಾಕೆಂದರೆ, ಯಾರಿಗೆ
ಗೊತ್ತು.. 'ನಾಳೆ ಹಲ್ಲು ಇರುತ್ತೋ, ಇಲ್ಲವೋ ಅಂತ
----------Orchid--------------
ುದ್ದಿವಂತರಾಗಿದ್ದರು.
ಗುಂಡ ಕಾಲೇಜಿಗೆ ಸರಿಯಾಗಿ ಬರುತ್ತಿದ್ದೂ ಓದಿನಲ್ಲಿ
ಹಿಂದೆ ಇದ್ದ. ಅಂತವನು ಒಂದು ದಿನ ಎದ್ದು ನಿಂತು
ಒಂದು ಪ್ರಶ್ನೆ ಕೇಳಿದ.... ಸರ್ 'ನಟುರ್' ಅಂದ್ರೆ ಏನ್ ಸರ್?..
..
..
ಸರ್ ಗ ಅರ್ಥ ಆಗಲಿಲ್ಲ ..ಆದ್ರೂ ನೋಡಿಕೊಂಡು ಹೇಳ್ತಿನಿ
ಅಂದು ಮನೆಗೆ ಬಂದು ಡಿಕ್ಷನರಿ ಜಾಲಾಡದ್ರೂ ಆ ಶಬ್ದ
ಸಿಗಲಿಲ್ಲ....
.......ಅಂದಿನಿಂದ ಗುಂಡ ಪ್ರತಿ ದಿನ ಅದೇ ಪ್ರಶ್ನೆ ಕೇಳ್ತಿದ್ದ
... ಅರ್ಥ ಗೊತ್ತಾಗದೇ ಸರ್ ಒದ್ದಾಡುತ್ತಿದ್ದರು....
ಕೊನೆಗೆ 15 ದಿನಗಳ ನಂತರ..
ಸರ್ ಗುಂಡನನ್ನ ಆಫೀಸ್ ರೂಮಿಗೆ ಕರೆದುಕೊಂಡು
ಹೋಗಿ... ಯಪ್ಪಾ.. ನಿನ್ನ ಶಬ್ದ ಬರೆದು ಕೊಡು..
ವಿದೇಶದಲ್ಲಿ ಇರುವ ನನ್ನ ಫ್ರೆಂಡ್ ಗೆ ಕೇಳ್ತಿನಿ ಅಂದ್ರು
..... ಆಗ ಗುಂಡ.. ಬರೆದು ಕೊಟ್ಟ' 'ನಟುರ್' ...............
....Nature..
..
ಇದನ್ನು ನೋಡಿದ ಸರ್ ಗೆ ಸಿಟ್ಟು ಬಂದು ಲೇ ಅದು ನಟುರ್
ಅಲ್ಲಲೇ ನೇಚರ್......15 ದಿನ ಕಾಡಿಸಿದ ನಿನ ಕಾಲೇಜಿಂದ
ಡಿಬಾರ್ ಮಾಡತಿನಿ... ಅಂದ್ರು...
ಅದಕ್ಕೆ... ಗುಂಡ..
ಬೇಡಿ ಸರ್ ನನ್ನ ಫುಟುರ್ (Future) ಹಾಳಾಗುತ್ತೆ.!
ಅಂದ..
--------------------------For-------
ರವಿ : ಅಜ್ಜಿ ನಂಗ ನಿದ್ದಿ ಬರವಲ್ದು,ಟಿವಿ ನೋಡ್ಲಿ?
ಅಜ್ಜಿ : ನೋಡಬ್ಯಾಡ, ನನ್ನ್ ಜೊತಿ ಮಾತಾಡ....
ರವಿ : ಅಜ್ಜಿ ನಾವ್ ಯಾವಗ್ಲೂ 6 ಮಂದಿ ಇರ್ತೇವಿ ನಮ್ಮ ಮನಿಯೊಳಗ,ನಾನು, ನೀನು, ಅಪ್ಪಾ, ಅವ್ವಾ, ತಂಗಿ ಮತ್ತ ನನ್ನ ಬೆಕ್ಕು...
ಅಜ್ಜಿ : ಇಲ್ಲಾ ನಾಳೆ 1 ನಾಯಿ ತರಾಕತ್ತೇವಿ ಮನಿಗ,ಅವಾಗ 7 ಮಂದಿ ಆಕ್ಕೆವಿ.
ರವಿ : ಆದ್ರ ನಾಯಿ ಬೆಕ್ಕನ ಓಡಿಸ್ತೇತಿ ಅವಾಗ ಮತ್ತೂ 6 ಮಂದಿಆಕ್ಕೆವಿ.
ಅಜ್ಜಿ : ನಿಂಗ ಲಘ್ನ ಮಾಡ್ತೇವಿ, ಅವಾಗ 7 ಮಂದಿ ಆಕ್ಕೆವಿ...
ರವಿ : ನನ್ನ ತಂಗಿದೂ ಮದುವಿಯಾಗಿ ಅಕಿ ಬ್ಯಾರೆ ಮನಿಗಹೊಕ್ಕ್ಯಾಳು,ಮತ್ತೂ 6 ಮಂದಿ ಆಕ್ಕೆವಿ.
ಅಜ್ಜಿ : ರವಿ ನಿಂಗ ಮಗು ಆಕ್ಕೆತಿ ಅವಾಗ ನಾವ್ ಮತ್ತ 7 ಮಂದಿಆಗ್ತೇವಿ...
ರವಿ : ಅಲ್ಲಿಮಟ ಅನ್ನೂದ್ರಾಗ ನೀ ಸತ್ತ ಹೋಗ್ತಿ,ಅವಾಗ ನಾವ್ ಮತ್ತೂ 6 ಮಂದಿನೇ ಉಳಿತೇವಿ.
ಅಜ್ಜಿ : ಹಲಕಟ್ ಬಾಡ್ಯಾ ..... ಹೋಗ್ ಟಿವಿ ನೋಡೋಗ್
-------------orchid-----------------
Boy:- ಹಾಯ್
Girl:- ಹಲೋ.
Boy:- ಎಲ್ಲಿದ್ಯ
Girl:- ಯಾಕೆ.
!Boy:- ಸುಮ್ನೆ
Girl:- ಓಕೆ.
Boy:- ಮನೇಲಿ ಯಾರ್ ಇದಾರೆ.
!Girl:- ಯಾರು ಇಲ್ಲಾ
.Boy:- ಬರ್ಲಾ.?
Girl:- ಬಾ.
Boy:- ಓಕೆ..
(ಹುಡುಗ ಮನೆ ಹತ್ರ ಬಂದು )Boy:- ಮನೆಗೆ ಬೀಗ ಹಾಕಿದೆ.!!!
Giirl:- ನನ್ ಅವಗ್ಲೆ ಹೇಳ್ಲಿಲ್ವಾ ಮನೇಲಿ ಯಾರು ಇಲ್ಲಾ ಅಂತ....
--------------Orchid---------------
ಸ್ವಲ್ಪ ನಗೋಣ ಬನ್ನಿ:
ಒಬ್ಬ ಇಂಜಿನಿಯರ್ ಗೆ ಕೆಲಸ ಸಿಗುವುದಿಲ್ಲ. ಆಗ ಅವನು ಒಂದು ಆಸ್ಪತ್ರೆಯನ್ನು ತೆರೆಯುತ್ತಾನೆ. ಮತ್ತೇ ಹೊರಗಡೆ ಬೋರ್ಡಿನ ಮೇಲೆ ಹೀಗೆ ಬರೆಯಿಸುತ್ತಾನೆ, "ಕೇವಲ 300ರೂಪಾಯಿಯಲ್ಲಿ ಚಿಕಿತ್ಸೆಯನ್ನು ಪಡೆಯಿರಿ, ಮತ್ತೇ ರೋಗ ವಾಸಿ ಆಗದೇ ಹೋದರೆ 1000ರೂಪಾಯಿಯನ್ನು ವಾಪಸ್ಸು ಪಡೆಯಿರಿ"
ಇದನ್ನು ನೋಡಿದ ಒಬ್ಬ ಡಾಕ್ಟರ್ ಹೀಗೆ ಯೋಚಿಸಿದ, "1000ರೂಪಾಯಿಯನ್ನು ಸಂಪಾದಿಸುವ ಒಳ್ಳೆಯ ಅವಕಾಶವಿದು" ಆಗ ಅವನು ರೋಗಿಯ ಥರ ನಟನೆ ಮಾಡುತ್ತಾ ಆಸ್ಪತ್ರೆಗೆ ಹೋಗುತ್ತಾನೆ.
ರೋಗಿಯಾದ ಡಾಕ್ಟರ್: ಸರ್ ನನಗೆ ವಸ್ತುಗಳ ರುಚಿ ಗೊತ್ತಾಗುತ್ತಿಲ್ಲ.
ಡಾಕ್ಟರ್ ಆದ ಇಂಜಿನಿಯರ್: ಬಾಕ್ಸ್ ನಂ. 22 ರಿಂದ ಔಷಧಿಯನ್ನು ತೆಗೆದು 3ಹನಿ ದವಾ ಕುಡಿಸಿದರು.
ರೋಗಿಯಾದ ಡಾಕ್ಟರ್: ಇದು ಪೆಟ್ರೋಲ್.
ಡಾಕ್ಟರ್ ಆದ ಇಂಜಿನಿಯರ್: ಶುಭಾಶಯಗಳು ತಮಗೆ. ರುಚಿಯ ಅನುಭವ ಆಯಿತು. ಕೊಡಿ 300ರೂಪಾಯಿ.
(ಮತ್ತೇ ಸ್ವಲ್ಪ ದಿನಗಳ ನಂತರ ರೋಗಿಯಾದ ಡಾಕ್ಟರ್ ನು ತನ್ನ ಹಳೆಯ ದುಡ್ಡನ್ನು ವಾಪಸ್ಸು ವಸೂಲಿ ಮಾಡಲು ಬರುತ್ತಾನೆ.)
ರೋಗಿಯಾದ ಡಾಕ್ಟರ್: ಸರ್ ನನಗೆ ಹಳೆಯದು ಯಾವುದು ನೆನಪಿಗೆ ಬರುತ್ತಿಲ್ಲ.
ಡಾಕ್ಟರ್ ಆದ ಇಂಜಿನಿಯರ್: ಬಾಕ್ಸ್ ನಂ. 23 ರಿಂದ ಔಷಧಿಯನ್ನು ತೆಗೆದು 3ಹನಿ ದವಾ ಕುಡಿಸಿದರು.
ರೋಗಿಯಾದ ಡಾಕ್ಟರ್: ಆದರೆ ಈ ಔಷಧಿಯೂ ನಾಲಿಗೆಯ ರುಚಿಯ ಸಲುವಾಗಿ ಅಲ್ಲವೇ?
ಡಾಕ್ಟರ್ ಆದ ಇಂಜಿನಿಯರ್: ಶುಭಾಶಯಗಳು ತಮಗೆ. ಹಳೆಯದು ನೆನಪಿಗೆ ಬಂದಿದೆ. ಆಯಿತು ಕೊಡಿ 300ರೂಪಾಯಿ.
(ಮತ್ತೊಮ್ಮೆ ಸ್ವಲ್ಪ ದಿನಗಳ ನಂತರ ರೋಗಿಯಾದ ಡಾಕ್ಟರ್ ನು ತನ್ನ ಹಳೆಯ ದುಡ್ಡನ್ನು ವಾಪಸ್ಸು ವಸೂಲಿ ಮಾಡಲು ಬರುತ್ತಾನೆ.)
ರೋಗಿಯಾದ ಡಾಕ್ಟರ್: ಸರ್ ನನಗೆ ಕಣ್ಣುಗಳು ಕಾಣಿಸುತ್ತಿಲ್ಲ.
ಡಾಕ್ಟರ್ ಆದ ಇಂಜಿನಿಯರ್: ಇದಕ್ಕೆ ನನ್ನ ಹತ್ತಿರ ಔಷಧಿ ಇಲ್ಲ. ತಗೊಳ್ಳಿ 1000ರೂಪಾಯಿ.
ರೋಗಿಯಾದ ಡಾಕ್ಟರ್: ಇದು 500ರೂಪಾಯಿಯ ನೋಟು ಇದೆ. 1000ರೂಪಾಯಿ ದು ಅಲ್ಲ.
ಡಾಕ್ಟರ್ ಆದ ಇಂಜಿನಿಯರ್: ಶುಭಾಶಯಗಳು ತಮಗೆ. ಕಣ್ಣುಗಳು ಕಾಣಿಸುತ್ತಿವೆ. ಆಯಿತು ಕೊಡಿ 300ರೂಪಾಯಿ.
-------------Orchid-----------------
⚾ ಕ್ರಿಕೆಟ್
ಕಾಲ ಕಾಲದಿಂದ, ಕ್ರಿಕೆಟ್ ನಡೆಯುತ್ತ ಬಂದಿದ್ದರು, ಅದರಲ್ಲಿ ಮೊದಲಿಂದಲೇ ಎಂಥಹ ಮೋಸ ನಡೀತಿದೆ ಎಂಬ
ಅಘಾಥಕಾರಿ ಸುbದ್ದಿಯನ್ನು ನಾವು ನಿಮಗೆ ಇಲ್ಲಿ ಪಾಯಿಂಟ್ ಟು ಪಾಯಿಂಟ್ ಕೊಟ್ಟಿದ್ದೇವೆ ತಪ್ಪದೆ ಓದಿ
ಮತ್ತೆ ಶೇರ್ ಮಾಡಿ.
⚾ಕೈಯಲ್ಲಿ ಬಾಲ್ ಇದ್ದರು ಅದನ್ನ ನೋ ಬಾಲ್ (No Ball)ಅಂತಾರೆ.
ಒಂದು ಒವರ್ ಗೆ 6 ಬಾಲ್ ಅಂತಾರೆ, ಆದರೆ ಒಂದೇ ಬಾಲನ್ನೆ ಮತ್ತೆ ಮತ್ತೆ ಬಳಸುತ್ತಾರೆ.
⚾All Out ಅಂತಾರೆ ಆದರೆ ಹತ್ತೇ ಜನ ಮಾತ್ರ ಔಟಗಿರುತ್ತಾರೆ,
ಇನ್ನೊಬ್ಬನು ಉಳಿದು ಕೊಂಡಿರುತ್ತಾನೆ.
ಅಂಪೈರ್ ಒಂದು ☝ ಕೈಯನ್ನ ಎತ್ತಿದರೆ ಔಟ್, ಆದರೆ ☝☝ಎರಡು ಕೈಯನ್ನ ಎತ್ತಿದರೆ ಸಿಕ್ಸ್ ಅಂತಾರೆ (ಇಬ್ಬರು ಔಟ್ ಅಂತ ಯಾರು ಹೇಳೋದು ಇಲ್ಲ ಕೇಳೋದು ಇಲ್ಲ)
ಇದರಲ್ಲಿ ಲಾಜಿಕ್ ಎಲ್ಲೋ ಎಡವುತ್ತಾ ಇದೆ.
⚾ಗೋಲ್ ಕೀಪರ್ ಅಂದ್ರೆ ಗೋಲ್ ಬೀಳದೆ ತಡೆಯುತ್ತಾರೆ, ಅದೇ ರೀತಿ ವಿಕೆಟ್ ಕೀಪರ್ ಅಂದರೆ ವಿಕೆಟ್ ಬೀಳದೆ ತಡೆಯ ಬೇಕಲ್ಲ, ಆದರೆ ಅವರೇ ವಿಕೆಟ್ ಬೀಳಿಸುತ್ತಾರೆ. ಇದು ಯಾವ ರೀತಿಯ ನ್ಯಾಯ.
ಕೆಲವು ಒವರ್ ಮಾತ್ರ ಪವರ್ ಪ್ಲೇ ಅಂತಾರೆ, ಹಾಗಾದರೆ ಮಿಕ್ಕ ಓವರ್ ಎಲ್ಲ ಪವರ್ ಇಲ್ಲದೆ ಕತ್ತಲಲ್ಲಿ
ಆಡಿಸುತ್ತಾರಾ...?
⚾ಒಬ್ಬರನ್ನ ಮಾತ್ರ Night Watchman- ಅಂತ ಕರಿತೀವಿ ಆದರೆ ಅವರು ಆಟ ಮುಗಿದ ಮೇಲೆ ಮೈದಾನ ಕಾಯೋದು ಬಿಟ್ಟು ರೂಂಗೆ ಹೋಗ್ತಾರೆ.
Tea Break- ಅಂತ ಹೇಳ್ತಾರೆ ಆದರೆ ಕೂಲ್ ಡ್ರಿಂಕ್ಸ್
ಕುಡಿತಾರೆ.
⚾ಇಡಿ ಮೈದಾನದಲ್ಲಿ ಎಲ್ಲ ಕಡೆ ಲೈಟ್ ಉರಿದರು,ಒಂದು ಕಡೆಯನ್ನು ಮಾತ್ರ off Side ಅಂತಾರೆ.
ಆಟ ಮುಗಿದ ಮೇಲೆ ಒಬ್ಬರನ್ನ ಮಾತ್ರ ಮ್ಯಾನ್ ಆಫ್ ದಿ ಮ್ಯಾಚ್ ಅಂತಾರೆ, ಹಾಗಾದರೆ ಉಳಿದವರೆಲ್ಲ women- ಅಂತಾನಾ?
⚾ಈಗ ನಿಮಗೆ ಗೊತ್ತಗಿರಬೇಕು ಇದು ಎಂತಹ ಮೋಸದಾಟ
ಎಂದು ಮರೆಯದೆ ನಿಮ್ಮ ಮಿತ್ರರಿಗೆ ತಿಳಿಸ
------------Orchidಿ----------------
ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)
ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"
ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"
ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."
ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."
ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ "ನೀವು ಎಂತಾ ಪುಣ್ಯವಂತರು....!!!"
ಕೋಪಗೊಂಡ ಹೆಂಡ್ತಿ "ಬಡ್ಕೊಂಡ್ರು. ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು,
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!"" nurse fainted
-----------Orchid-------------------
ಬದಲಾಗದ ಹಣೆಬರಹ
ಒಂದು ದಿನ ಯಮಧರ್ಮ ಒಬ್ಬ ಹುಡುಗನ ಬಳಿ ಬಂದು ನುಡಿಯುತ್ತಾನೆ "ಮಾನವ, ಇವತ್ತು ನಿನ್ನ ಕೊನೆಯ ದಿನ"
ಹುಡುಗ: ಇಲ್ಲಾಗುರು ನಾನಿನ್ನು ಸಾಯೋಕೆ ರೆಡಿ ಆಗಿಲ್ಲಾ. ಇನ್ನು ಬೇಜಾನ್ ಕೆಲ್ಸ ಇದೆ ನಂಗೆ.
ಯಮಧರ್ಮ: ಆದರೆ ವಿಧಿಬರಹ ಹಾಗಿದೆ. ನಿನ್ನ ಹೆಸರೆ ಇವತ್ತು ಲಿಸ್ಟನಲ್ಲಿ ಮೊದಲಿದೆ.
ಹುಡುಗ: ಓಹ್, ಹೌದಾ? ಆಯ್ತು. ಒಂದ್ ನಿಮಿಷ ಕೂತ್ಕೊ. ಇಬ್ರೂ ಒಂದ್ ಕಾಫೀ ಕುಡ್ಕೋಂಡ್ ಹೋಗೋಣ.
ಯಮಧರ್ಮ: ಸರಿ ಹಾಗೇ ಆಗಲಿ. ಹುಡುಗ ಯಮಧರ್ಮನಿಗೆ ಕಾಫೀಯೊಳಗೆ ನಿದ್ದೆ ಮಾತ್ರೆ ಬೆರೆಸಿ ಕೊಡ್ತಾನೆ. ಯಮರಾಜ ಕಾಫೀ ಕುಡಿದು ಗಡದ್ದಾಗಿ ನಿದ್ದೆ ಮಾಡಿಬಿಡ್ತಾನೆ.
ಹುಡುಗ ಯಮಧರ್ಮನ ಡೆತ್ ಲಿಸ್ಟ್ ತೊಗೊಂಡು ಮೊದಲಿದ್ದ ತನ್ನ ಹೆಸರನ್ನು ಅಳಿಸಿ ಕೊನೆಯಲ್ಲಿ ಬರೆದುಬಿಡುತ್ತಾನೆ.
ಯಮಧರ್ಮ ನಿದ್ದೆಯಿಂದ್ದೆದು ಹುಡುಗನಿಗೆ ಹೇಳ್ತಾನೆ: ನೀ ಕೊಟ್ಟ ಕಾಫೀ ಅದ್ಭುತವಾಗಿತ್ತು. ಹಾಗಾಗಿ ನಿನಗೆ ಒಂದು ರಿಯಾಯಿತಿ ಕೊಡ್ತೀನಿ. ಇವತ್ತು ನನ್ನ ಕೆಲಸವನ್ನು ಲಿಸ್ಟನ ಕೊನೆಯಿಂದ ಶುರುಮಾಡಲು ತೀರ್ಮಾನಿಸಿದ್ದೇನೆ.
ಹಣೆಬರಹ ಏನ್ ಮಾಡಿದ್ರೂ ಬದಲಾಗಲ್ಲ.
---------------Orchid-------------
GIRL:-I love U kano! I want to marry u..
BOY:- Different agi Propose madu.
.
.
.
.
GIRL:Nin henakke benki ido avakasha nan maganige kodthiya..!!
good night ❤
--------------Orchid--------------
ಒಂದು ಕಛೇರಿಯಲ್ಲಿ ಒಬ್ಬ ಬ್ರಿಟೀಶ್ ಅಧಿಕಾರಿಯಿದ್ದ...ಆತನಿಗೆ ಕನ್ನಡ ಬರುತ್ತಿರಲಿಲ್ಲ...ಅದೇ ಕಛೇರಿಯಲ್ಲಿದ್ದ ಗುಮಾಸ್ತನಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಒಮ್ಮೆ ಗುಮಾಸ್ತನ ತಂದೆಯ ಶ್ರಾದ್ದದ ಸಲುವಾಗಿ ರಜೆ ಕೋರಿ ಇಂಗ್ಲೀಷ್ ನಲ್ಲಿ ರಜಾ ಚೀಟಿ ಬರೆದ "tomarro my fathers Thithi..grant one day leave." ಪಾಪ ಆ ಅಧಿಕಾರಿಗೆ thithi ಅಂದರೇನೆಂದು ತಿಳಿಯಲಿಲ್ಲ ಗುಮಾಸ್ತನನ್ನು ಕರೆದು ಕೇಳಿದ. ಗುಮಾಸ್ತ thithi ಅಂದರೆ thithi ಅಂದ. ಅಧಿಕಾರಿಗೆ ಅರ್ಥವಾಗದಿದ್ದರೂ ರಜೆ ಮಂಜೂರು ಮಾಡಿದ.
ಗುಮಾಸ್ತ ಮಾರನೇ ದಿನ ತಿಥಿ ಮುಗಿಸಿಕೊಂಡು ಒಬ್ಬಟ್ಟನ್ನು ಅಧಿಕಾರಿಗೆ ಅಭಿಮಾನದಿಂದ ನೀಡಿದ. ಒಬ್ಬಟ್ಟಿನ ರುಚಿಗೆ ಮಾರುಹೋದ ಅಧಿಕಾರಿ..what is..how to make it ಅಂತ ಕೇಳಿದ. ಗುಮಾಸ್ತನಿಗೆ ಇಂಗ್ಲೀಷ್ ನಲ್ಲಿ ವಿವರಿಸಬೇಕಾದ ಒತ್ತಡ. ಆದರೂ ಹೇಳಿದ. This is OBBATTU.... this is poornam..this is hittu...putting..lutting...eating ಅಂತ ಹೇಳಿದ.
ಹರ್ಷಗೊಂಡ ಅಧಿಕಾರಿ ಹೇಳಿದ "I will sanction two more days leave to you..make my THITHI and bring some more Obbats."
-----------Orchid----------------
ರಾತ್ರಿ 2 ಗಂಟೆಗೆ ಒಮ್ಮೆಲೆ ಹೆಂಡತಿ, ಗಂಡನನ್ನು ನಿದ್ದೆಯಿಂದ ಎಬ್ಬಿಸಿದಳು:
ಹೆಂಡತಿ: ☺️ ತ್ರಿದೇವ್ ಸಿನೆಮಾದಲ್ಲಿದ್ದ ಹೀರೋಯಿನಿಗಳ ಹೆಸರೇನು?
ಗಂಡ: ಮಾಧುರಿ ದಿಕ್ಷಿತ್, ಸಂಗೀತಾ ಬಿಜಲಾನಿ, ಸೋನಮ್!
ಹೆಂಡತಿ: ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಫಿಲ್ಮಿನಲ್ಲಿ ಕಾಜೋಲ್ ಮಾಡಿದ ರೋಲ್ ಹೆಸರೇನು?
ಗಂಡ: ಸಿಮ್ರನ್!!
ಹೆಂಡತಿ: ಎರಡು ವರ್ಷದ ಹಿಂದೆ ಪಕ್ಕದ್ಮನೆ ಖಾಲಿ ಮಾಡಿ ಮೈಸೂರಿಗೆ ಶಿಫ್ಟ್ ಆದ್ರಲ್ಲ, ಆ ಹೆಂಗಸಿನ ಹೆಸರೇನು?
ಗಂಡ: ಮೀನಾಕ್ಷಿ!! ಇದನ್ನೆಲ್ಲ ಈಗ್ಯಾಕೆ ಕೇಳ್ತಾ ಇದ್ದೀ?
ಹೆಂಡತಿ: ನಿನ್ನೆ ನನ್ನ ಬರ್ಥ್ ಡೇ ಇತ್ತು!!
ಭೀಕರ ಮೌನ!!!!!!!!


Chidananda S

Phasellus facilisis convallis metus, ut imperdiet augue auctor nec. Duis at velit id augue lobortis porta. Sed varius, enim accumsan aliquam tincidunt, tortor urna vulputate quam, eget finibus urna est in augue.

No comments:

Post a Comment